ಇಂದು ಬಾಗಿಲು ತೆರೆಯಲಿದೆ ಶಬರಿಮಲೆ ದೇಗುಲ

252

ಪ್ರಜಾಸ್ತ್ರ ಸುದ್ದಿ

ತಿರುವನಂತಪುರ: ದೇಶದ ಪ್ರಸಿದ್ಧ ಅಯ್ಯಪ್ಪಸ್ವಾಮಿ ದೇಗುಲದ ಬಾಗಿಲು ಇಂದು ಸಂಜೆ ತೆರೆಯಲಿದೆ. ಮಂಡಲ ಪೂಜಾ ಉತ್ಸವದ ಹಿನ್ನೆಲೆಯಲ್ಲಿ ಭಾನುವಾರ ಸಂಜೆ 5 ಗಂಟೆಗೆ, ದೇವಸ್ಥಾನದ ಮುಖ್ಯ ಅರ್ಚಕ ಎ.ಕೆ ಸುಧೀರ ನಂಬೂದರಿ, ತಂತ್ರಿಗಳಾದ ಕಂಡಾರರು ರಾಜೀವ ಅವರ ಸಮ್ಮುಖದಲ್ಲಿ ಗುರ್ಭಗುಡಿ ಬಾಗಿಲು ತೆರೆಯಲಿದ್ದಾರೆ.

ಸೋಮವಾರದ ವೃಶ್ಚಿಕದ ಮೊದಲ ದಿನ ದೇವಸ್ಥಾನದಲ್ಲಿ ಸಂಪ್ರಾದಯಕ ಕಾರ್ಯಗಳನ್ನ ನಡೆಸಲಿದ್ದಾರೆ. ಇದರ ಜೊತೆಗೆ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಕೋವಿಡ್ 19 ಹಿನ್ನೆಲೆಯಲ್ಲಿ ಒಂದು ದಿನಕ್ಕೆ ಒಂದು ಸಾವಿರ ಭಕ್ತರಿಗೆ ಒಳ ಹೋಗಿ ಬರಲು ಮಾತ್ರ ಅವಕಾಶವಿದೆ.

ಭಕ್ತರು ಮಾಸ್ಕ್ ಧರಿಸಿಕೊಂಡು ಸಾಮಾಜಿಕ ಅಂತರ ಪಾಲಿಸಬೇಕು. ನಿಗದಿ ಮಾಡಿರುವ ಸ್ಥಳದಲ್ಲಿಯೇ ನಿಂತು ದರ್ಶನ ಪಡೆಯಬೇಕು. 60 ವರ್ಷ ಮೇಲ್ಪಟ್ಟವರು ವೈದ್ಯಕೀಯ ಪ್ರಮಾಣ ಪತ್ರ ತೋರಿಸುವುದು ಕಡ್ಡಾಯ. ಇನ್ನು ದರ್ಶನ ಪಡೆಯುವ 24 ಗಂಟೆ ಮೊದ್ಲು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು. ವರದಿ ನೆಗೆಟಿವ್ ಬಂದ್ರೆ ಮಾತ್ರ ಅವಕಾಶ.




Leave a Reply

Your email address will not be published. Required fields are marked *

error: Content is protected !!