ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಖ್ಯಾತ ಹಿರಿಯ ಪತ್ರಕರ್ತ 62 ವರ್ಷದ ರವಿ ಬೆಳಗೆರೆ ನಿಧನರಾಗಿದ್ದಾರೆ. ಹೃದಯಾಘಾತದಿಂದಾಗಿ ಇಂದು ಬೆಳಗ್ಗೆ ನಿಧನರಾಗಿದ್ದಾರೆ. ನಗರದ ಪದ್ಮನಾಭ ನಗರ ಕಚೇರಿಯಲ್ಲಿ ನಿಧನರಾಗಿದ್ದಾರೆ.
ಹಾಯ್ ಬೆಂಗಳೂರು ಪತ್ರಿಕೆ ಮೂಲಕ ನಾಡಿನ ಜನಮಾತಾಗಿದ್ರು. ಕ್ರೈಮ್ ದುನಿಯಾದ ಇಂಚು ಇಂಚು ರಹಸ್ಯಗಳನ್ನ ಬಯಲು ಮಾಡಿದ್ರು. ಇನ್ನು ಸಾಹಿತ್ಯದಲ್ಲಿ ಕೃಷಿ ಮಾಡಿದ ಬೆಳಗೆರೆ 50 ಕ್ಕೂ ಹೆಚ್ವು ಕೃತಿಗಳನ್ನ ರಚಿಸಿದ್ದಾರೆ.
ಇನ್ನು ಚಿತ್ರರಂಗದಲ್ಲಿಯೂ ಕೆಲಸ ಮಾಡಿದ್ರು. ನಟನಾಗಿಯೂ ಕಾಣಿಸಿಕೊಂಡ್ರು. ಪ್ರಾರ್ಥನಾ ಅನ್ನೋ ಸ್ಕೂಲ್ ಮೂಲಕ ಶೈಕ್ಷಣಿಕ ಸೇವೆ ಸಹ ಸಲ್ಲಿಸಿದ್ದಾರೆ.