ಪ್ರಜಾಸ್ತ್ರ ಸುದ್ದಿ
ಉಡುಪಿ: ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ಅನುಭವಿಸಿದೆ. ಹೀಗಾಗಿ ಬಿಜೆಪಿಗರ ಭರ್ಜರಿಯಾಗಿ ಬ್ಯಾಟಿಂಗ್ ಮಾಡ್ತಿದ್ದಾರೆ. ಒಬ್ಬೊಬ್ಬ ನಾಯಕ ಒಂದೊಂದು ರೀತಿಯ ಹೇಳಿಕೆ ನೀಡ್ತಿದ್ದಾರೆ. ಇದೆಲ್ಲದರ ನಡುವೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ, ಉಪ ಚುನಾವಣೆ ಸೋಲಿಗೆ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ ಕಾರಣ ಎಂದಿದ್ದಾರೆ.
ಆರ್.ಆರ್ ನಗರದ ಸೋಲಿಗೆ ಸಿದ್ದರಾಮಯ್ಯ, ಶಿರಾ ಸೋಲಿಗೆ ಡಿ.ಕೆ ಶಿವಕುಮಾರ ಕಾರಣ ಎಂದು ಕಟೀಲ ಹೇಳಿದ್ದಾರೆ. ಕಾಂಗ್ರೆಸ್ ನವರು ವೈಯಕ್ತಿಕ ಟೀಕೆ ಮಾಡಿದ್ರು. ಅದರ ಪರಿಣಾಮ ಸೋಲು ಅನುಭವಿಸಿದ್ರು. ಇನ್ನು 2 ವಿಧಾನಸಭೆ, 1 ಲೋಕಸಭೆ ಚುನಾವಣೆ ಬರುತ್ತೆ. ಅಲ್ಲಿಯೂ ಬಿಜೆಪಿ ಗೆಲುವು ದಾಖಲಿಸಲಿದೆ ಎಂದು ಕಟೀಲ ಹೇಳಿದ್ದಾರೆ.