ಪ್ರಜಾಸ್ತ್ರ ಸುದ್ದಿ
ನವದೆಹಲಿ: ದ್ವಾರಕಾ ಶಾರದಾ ಪೀಠದ ಶಂಕರಾಚಾರ್ಯ ಸ್ವರೂಪಾನಂದ ಸರಸ್ವತಿ(99) ಭಾನುವಾರ ನಿಧನರಾಗಿದ್ದಾರೆ. ಮಧ್ಯಪ್ರದೇಶದ ನರಸಿಂಗಪುರದಲ್ಲಿ ಕೊನೆಯುಸಿರೆಳೆದಿದ್ದಾರೆ. ಸೆಪ್ಟೆಂಬರ್ 9ರಂದು 99ನೇ ಹುಟ್ಟು ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದರು.
ಸೆಪ್ಟೆಂಬರ್ 9, 1924 ರಂದು ಜನಿಸಿದ್ದಾರೆ. ಶಂಕರಾಚಾರ್ಯರ ಮೊದಲ ಹೆಸರು ಪೋತಿರಾಮ್. ಸ್ವಾತಂತ್ರ್ಯ ಚಳವಳಿಯಲ್ಲಿಯೂ ಭಾಗವಹಿಸಿದ್ದರು. 1989ರಲ್ಲಿ ಶಂಕರಾಚಾರ್ಯ ಅನ್ನೋ ಬಿರುದು ಪಡೆದರು.