ಮುಂಬೈ: ಇಂದ್ರನ ಸಿಂಹಾಸನ ನೀಡಿದ್ರೂ ಬಿಜೆಪಿ ಜೊತೆ ದೋಸ್ತಿ ಮಾಡುವುದಿಲ್ಲವೆಂದು ಶಿವಸೇನೆ ಸಂಸದ ಸಂಜಯ ರಾವತ್ ಹೇಳಿದ್ದಾರೆ. ಎನ್ ಸಿಪಿ ಹಾಗೂ ಕಾಂಗ್ರೆಸ್ ಜೊತೆ ಸೇರಿಕೊಂಡು ಸರ್ಕಾರ ರಚನೆ ಮಾಡಿದ್ರೆ ಸಿಎಂ ಸ್ಥಾನ ಸಿಗುತ್ತೆ ಅಂತಾ ಹೇಳಿದ್ರು.
ಇಂದು ರಾಜ್ಯಪಾಲರನ್ನ ಭೇಟಿಯಾಗಿ ಹಕ್ಕು ಮಂಡಿಸುವ ಕುರಿತು ಕೇಳಿದ ಪ್ರಶ್ನೆಗೆ, ರಾಷ್ಟ್ರಪತಿ ಆಡಳಿತ ಇರುವಾಗಿ ರಾಜ್ಯಪಾಲರನ್ನ ಯಾಕೆ ಭೇಟಿ ಮಾಡಬೇಕು ಎಂದು ಮಾಧ್ಯಮದವರಿಗೆ ಮರು ಪ್ರಶ್ನೆ ಹಾಕಿದ್ರು. ನಿನ್ನೆ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಹಾಗೂ ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ ಮಾತುಕತೆ ನಡೆಸಿ, ಸಿಎಂ ಸ್ಥಾನ ಶಿವಸೇನೆಗೆ ಐದು ವರ್ಷ ಇರಬೇಕಾ ಅಥವ ಸಮನಾಗಿ ಹಂಚಿಕೆಯಾಗಬೇಕಾ ಅನ್ನೋ ಕುರಿತು ಚರ್ಚೆ ನಡೆಸಿದ್ದಾರೆ. ಅಲ್ದೇ, ಉದ್ಧವ್ ಠಾಕ್ರೆಯನ್ನ ಸಿಎಂ ಮಾಡಲು ಎರಡೂ ಪಕ್ಷಗಳು ಒಪ್ಪಿಕೊಂಡಿದೆ ಎಂದು ಎನ್ ಸಿಪಿ ಹಿರಿಯ ಲೀಡರ್ ರೊಬ್ಬರು ಹೇಳಿದ್ದಾರೆ.
ಶಿವಸೇನೆ, ಎನ್ ಸಿಪಿ ಹಾಗೂ ಕಾಂಗ್ರೆಸ್ ಸೇರಿ ಸರ್ಕಾರ ರಚನೆ ಮಾಡಿದ್ರೆ ಶಿವಸೇನೆಗೆ 16, ಎನ್ ಸಿಪಿಗೆ 15 ಹಾಗೂ ಕಾಂಗ್ರೆಸ್ ಗೆ 12 ಸ್ಥಾನಗಳ ಹಂಚಿಕೆಯಾಗಲಿದೆ. ಇದಕ್ಕಾಗಿ ಮೂರು ಪಕ್ಷಗಳು ಸೇರಿಕೊಂಡು ಟೈಂ ಫಿಕ್ಸ್ ಮಾಡಲು ನೋಡ್ತೀವಿ ಎಂದು ಹೇಳಲಾಗ್ತಿದೆ. ಇದು ಎಷ್ಟರ ಮಟ್ಟಿಗೆ ಸಕ್ಸಸ್ ಆಗುತ್ತೆ ಅನ್ನೋ ನಂಬಿಕೆ ಕೆಲ ನಾಯಕರಿಗೆ ಇಲ್ಲ ಅಂತಾ ಹೇಳಲಾಗ್ತಿದೆ.