ಬೆಂಗಳೂರು: ಯುವಕನೊಬ್ಬನನ್ನು ಎರಡು ದಿನಗಳ ಹಿಂದೆ ಕೊಲೆ ಮಾಡಿ, ಇನ್ನೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಎಸ್ಕೇಪ್ ಆಗಿದ್ದ ಹಂತಕರನ್ನ ಪೊಲೀಸ್ರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶಿವಾಜಿನಗರದ ಮಹಮ್ಮದ ರಿಜ್ವಾನ ಹಾಗೂ ದೇವರ ಜೀವನಹಳ್ಳಿಯ ಫರ್ವೇಜ ಅಹ್ಮದ ಬಂಧಿತ ಆರೋಪಿಗಳಾಗಿದ್ದಾರೆ.
ಪೂರ್ವ ವಿಭಾಗದ ಪೊಲೀಸ್ರು ಆರೋಪಿಗಳ ಕಾಲಿಗೆ ಗುಂಡೇಟು ಹೊಡೆದು ಬಂಧಿಸಿದ್ದಾರೆ. ರಿಜ್ವಾನ್ ಅಣ್ಣ ಇರ್ಷಾದನ ಪತ್ನಿಯೊಂದಿಗೆ ಯುವಕ ಅಬ್ದುಲ ಮತೀನ ಎಂಬಾತ ಅಕ್ರಮ ಸಂಬಂಧ ಹೊಂದಿದ್ದನಂತೆ. ಗಾಂಜಾ ವ್ಯಸನಿಯಾಗಿದ್ದ ಮತೀನ ಡಿಸೆಂಬರ್ ನಲ್ಲಿ ಇರ್ಷಾದನನ್ನ ಕೊಲೆ ಮಾಡಿದ್ದ ಅಂತಾ ಹೇಳಲಾಗ್ತಿದೆ. ಈ ಬಗ್ಗೆ ರಿಜ್ವಾನ ಎಚ್ಚರಿಕೆ ನೀಡಿದ್ರೂ ಮತೀನ ಅಕ್ರಮ ಸಂಬಂಧ ಮುಂದುವರೆಸಿದ್ದನಂತೆ. ಹೀಗಾಗಿ 7 ಮಂದಿ ಜೊತೆ ಸಂಚು ರೂಪಿಸಿ ಕೊಲೆ ನಡೆಸಲಾಗಿದೆಯಂತೆ.
ಇಬ್ಬರು ಆರೋಪಿಗಳ ಜೊತೆ ಮಹಮ್ಮದ ಸಫಾನ, ಮಹಮ್ಮದ ತಂಜಿಲ, ಸೈಯದ ಅಲಿ, ಯಾಸೀನ ಖಾನ ಹಾಗೂ ಶಾಹಿದ ಎಂಬುವರನ್ನ ಸಹ ಬಂಧಿಸಲಾಗಿದೆ. ಮಹಮ್ಮದ ರಿಜ್ವಾನ ಭಾರತಿನಗರದಲ್ಲಿ ಒಂದು ಕೊಲೆ, ಶಿವಾಜಿನಗರದಲ್ಲಿ ಸೇರಿದಂತೆ 4 ಅಪರಾಧಿ ಪ್ರಕರಣ, ಒಂದು ಅಪಹರಣ ಸೇರಿ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಫರ್ವೇಜ್ ಡಿ.ಜೆ ಹಳ್ಳಿಯಲ್ಲಿ 2 ಕೊಲೆ ಯತ್ನ, ಬೆದರಿಕೆ, ಶಿವಾಜಿನಗರದಲ್ಲಿ 1 ಕೊಲೆ ಸೇರಿದಂತೆ ನಾಲ್ಕು ಕೇಸ್ ಗಳಲ್ಲಿ ಪೊಲೀಸ್ರಿಗೆ ಬೇಕಾಗಿದ್ದ.