ಪ್ರಜಾಸ್ತ್ರ ಸುದ್ದಿ
ಶಿವಮೊಗ್ಗ: ಗಣಪತಿ ಮೆರವಣಿಗೆ ಸಂದರ್ಭದಲ್ಲಿ ನಡೆದ ಘಟನೆ ನಿಜಕ್ಕೂ ದೇಶದ್ರೋಹಿಗಳಿಂದ ಮಾತ್ರ ಸಾಧ್ಯ. ಪದೆಪದೆ ವಿವಾದ, ಹಿಂಸೆಗೆ ಮಲೆನಾಡು ಕಾರಣವಾಗುತ್ತಿರುವುದು ರಾಜ್ಯ ಬಿಜೆಪಿ ಸರ್ಕಾರದ ವೈಫಲ್ಯ ಹಾಗೂ ಜಾಣ ಮೌನ, ಕುರುಡುತನದ ಪರಮಾವಧಿ.
ನಗರದ ಹಿಂದೂ ಮಹಾಗಣಪತಿ ಮಂಡಳಿ ವತಿಯಿಂದ ಗಣೇಶ ವಿಸರ್ಜನೆ ಮೆರವಣಿಗೆ ನಡೆಸಲಾಗಿದೆ. ಅದನ್ನು ಶಾಂತಿಯುತವಾಗಿ ಮಾಡುವುದನ್ನು ಬಿಟ್ಟು, ಅಶೋಕ ಸ್ಥಂಭದ ಮೇಲೆ ಕೇಸರಿ ಧ್ವಜವನ್ನು ಹಾರಿಸಿದ್ದಾರೆ. ಜೊತೆಗೆ ಗಾಂಧಿ ಕೊಂದ ಹಂತಕ ನಾಥೋರಾಮ್ ಗೋಡ್ಸೆ ಫೋಟೋ ಮೆರವಣಿಗೆ ನಡೆಸಿದ್ದಾರೆ.
ನಗರದ ಕೋಟೆ ಭೀಮೇಶ್ವರ ದೇವಸ್ಥಾನದಿಂದ ಮೆರವಣಿಗೆ ನಡೆಸಿದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಪದೆಪದೆ ಈ ರೀತಿಯ ಘಟನೆಗಳು ಮರುಕಳಿಸಲು ಕಾರಣ ಬಿಜೆಪಿ ರಾಜಕೀಯ ನಾಯಕರು ನೀಡುವ ಕೋಮುದ್ವೇಷದ ಹೇಳಿಕೆಯಿಂದ ಸಾರ್ವಜನಿಕರು ವಾಗ್ದಾಳಿ ನಡೆಸಿದ್ದಾರೆ. ಬೇರೆಯವರಿಗೆ ಪದೆಪದೆ ದೇಶದ್ರೋಹಿಗಳು ಎನ್ನುವ ಬಿಜೆಪಿಗರು, ಹಿಂದೂ ಕಾರ್ಯಕರ್ತರು ಸ್ವತಃ ತಾವೇ ದೇಶದ್ರೋಹದ ಕೆಲಸ ಮಾಡಿದ್ದಾರೆ ಎಂದು ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ.