ಬೆಂಗಳೂರು: ರೌಡಿಶೀಟರ್ ಸೀನ ಅಲಿಯಾಸ್ ಸಿಗಡಿ ಸೀನನ ಕಾಲಿಗೆ ಪೊಲೀಸ್ರು ಗುಂಡು ಹಾರಿಸಿ ಬಂಧಿಸಿದ್ದಾರೆ. ಇಂದು ಬೆಳಗ್ಗೆ ಜಾಲಹಳ್ಳಿಯಲ್ಲಿ ಬಂಧಿಸಲಾಗಿದೆ. ಈ ಸೀನ ರಾಜಗೋಪಲನಗರ ಠಾಣೆಯಲ್ಲಿ ರೌಡಿಶೀಟರ್ ಲಿಸ್ಟ್ ನಲ್ಲಿದ್ದಾನೆ ಎಂದು ಪೊಲೀಸ್ರು ತಿಳಿಸಿದ್ದಾರೆ.
ರಸ್ತೆ ಬದಿ ನಿಂತಿದ್ದ ಗಾಡಿಯೊಂದನ್ನ ಜಖಂ ಮಾಡಿರುವ ಕೇಸಿಗೆ ಸಂಬಂಧಿಸಿದಂತೆ ಮಾಹಿತಿ ಬಂದಾಗ, ರಾಜಗೋಪಾಲನಗರ ಠಾಣೆ ಇನ್ಸ್ ಪೆಕ್ಟರ್ ದಿನೇಶ ಪಾಟೀಲ ಹಾಗೂ ಸಿಬ್ಬಂದಿ ಅರೆಸ್ಟ್ ಮಾಡಲು ಹೋಗಿದ್ರು. ಈ ವೇಳೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಕಾನ್ಸ್ ಟೇಬಲ್ ವೀರಭದ್ರಪ್ಪನ ಮೇಲೆ ಚಾಕುವಿನಿಂದ ಇರಿದು ಹಲ್ಲೆಗೆ ಯತ್ನಿಸಿದಾಗ ಇನ್ಸ್ ಪೆಕ್ಟರ್ ದಿನೇಶ ಕಾಲಿಗೆ ಗುಂಡು ಹಾರಿಸಿದ್ದಾರೆ.
ರಾಜಗೋಪಾಲ ನಗರದಲ್ಲಿ 11 ಆಟೋ ಹಾಗೂ 4 ಕಾರಿನ ಗಾಜು ಒಡೆದ ಕೇಸ್ ಸೀನನ ಮೇಲಿದೆ. ಘಟನೆಯಲ್ಲಿ ಗಾಯಗೊಂಡ ಕಾನ್ಸ್ ಟೇಬಲ್ ಹಾಗೂ ರೌಡಿಶೀಟರ್ ಸೀನನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ.