ಮುಂಬೈ: ಮಹಾರಾಷ್ಟ್ರ ರಾಜಕೀಯದಲ್ಲಿ ಅಧಿಕಾರದ ದಾಹದಿಂದಾಗಿ ರಾಷ್ಟ್ರಪತಿ ಆಡಳಿತದತ್ತ ಮುಖ ಮಾಡಿದೆ. ರಾಜ್ಯಪಾಲ ಭಗತ್ ಸಿಂಗ್ ಕೋಶಾರಿಯಾ ಅವರು ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡಿದ್ದಾರೆ.
ಬಿಜೆಪಿ ಹಾಗೂ ಶಿವಸೇನೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ರೂ ಅಧಿಕಾರದ ದಾಹದಿಂದಾಗಿ ಸರ್ಕಾರ ರಚನೆಗೆ ಗುದ್ದಾಟ ನಡೆಸಿದೆ. ಇದರ ನಡುವೆ ಬಹುಕಾಲದ ದೋಸ್ತಿ ಬಿಟ್ಟು ಶಿವಸೇನೆಗೆ ಎನ್ ಸಿಪಿ ಹಾಗೂ ಕಾಂಗ್ರೆಸ್ ಬೆಂಬಲಕ್ಕೆ ಮುಂದಾಗಿದೆ. ಇದಕ್ಕಾಗಿ ಶಿವಸೇನೆ ಸಮಯ ಕೇಳಿದರ ನಡುವೆಯೇ ರಾಜ್ಯಪಾಲರು ರಾಷ್ಟ್ರಪತಿ ಆಡಳಿತಕ್ಕೆ ಕೇಂದ್ರಕ್ಕೆ ಇಂದು ಶಿಫಾರಸು ಕಳಿಸಿದ್ದಾರೆ.