ಡಿಕೆ ಶಿವಕುಮಾರ ಅರ್ಜಿ ವಜಾ

361

ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಐಟಿ ಇಲಾಖೆ ಅಧಿಕಾರಿಗಳು ದಾಖಲಿಸಿಕೊಂಡಿರುವ ಪ್ರಕರಣಗಳನ್ನ ವಜಾಗೊಳಿಸುವಂತೆ ಕೋರಿ, ಮಾಜಿ ಸಚಿವ ಡಿ.ಕೆ ಶಿವಕುಮಾರ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿ ವಜಾ ಮಾಡಲಾಗಿದೆ.

ದೆಹಲಿ ಹೈಕೋರ್ಟ್ ನಲ್ಲಿ ಮಾಜಿ ಸಚಿವ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನ ವಜಾಗೊಳಿಸಲಾಗಿದೆ. ಇನ್ನು ಡಿಕೆಶಿ ಆಪ್ತರಾದ ಸುನೀಲಕುಮಾರ ಶರ್ಮಾ, ರಾಜೇಂದ್ರ ಹಾಗೂ ಆಂಜನೇಯ ಅವರ ಅರ್ಜಿಗಳನ್ನ ಸಹ ಕೋರ್ಟ್ ವಜಾಗೊಳಿಸಿದೆ. ಈ ಮೂಲಕ ಡಿಕೆಶಿಗೆ ಮತ್ತೆ ಹಿನ್ನೆಡೆಯಾಗಿದೆ.

ಬೆಂಗಳೂರು ಹಾಗೂ ದೆಹಲಿ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ರು. ವೇಳೆ ಕೋಟ್ಯಾಂತರ ರೂಪಾಯಿ ಹವಾಲ ಹಣ ಪತ್ತೆಯಾಗಿತ್ತು. ಇದರಲ್ಲಿ ಅವರು ಶಾಮೀಲಾಗಿದ್ದಾರೆ ಎಂದು ಆರೋಪಿಸಿ ತೆರಿಗೆ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದ್ರೆ, ಪ್ರಕರಣದಲ್ಲಿ ಸೂಕ್ತ ದಾಖಲೆಗಳ ಕೊರೆತಯಿದೆ. ಆಧಾರರಹಿತ ದೂರಾಗಿದ್ದು ಇದನ್ನ ಕೈಬಿಡಬೇಕೆಂದು ಕೋರಿ ಡಿಕೆಶಿ ಹಾಗೂ ಅವರ ಆಪ್ತರು ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ರು. ಅದು ಇಂದು ತಿರಸ್ಕಾರಗೊಂಡಿದೆ.




Leave a Reply

Your email address will not be published. Required fields are marked *

error: Content is protected !!