ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ವಿಕೃತ ಕಾಮಿ, ಸರಣಿ ಹಂತಕ ಉಮೇಶ್ ರೆಡ್ಡಿ, ಸೈಕೋ ಜೈಶಂಕರ್ ನಂತರ ಸಿಲಿಕಾನ್ ಸಿಟಿಯಲ್ಲಿ ಮತ್ತೊಬ್ಬ ಕಾಮುಕ ಮಹಿಳೆಯರಲ್ಲಿ ಆತಂಕ ಮೂಡಿಸಿದ್ದಾನೆ. ಒಂಟಿ ಮಹಿಳೆಯರನ್ನೇ ಟಾರ್ಗೆಟ್ ಮಾಡಿಕೊಂಡಿರುವ ಈತ ಕೆಲ ದಿನಗಳಿಂದ ನಗರದಲ್ಲಿ ಭಯ ಹುಟ್ಟಿಸಿದ್ದಾನೆ.
ಮಹಿಳೆಯರ ಹಾಸ್ಟೇಲ್ ಗೆ ನುಗ್ಗುವುದು, ಮಹಿಳೆಯರು ಸ್ನಾನ ಮಾಡುವುದನ್ನು ರೆಕಾರ್ಡ್ ಮಾಡಿಕೊಳ್ಳುವುದು, ಅವರ ಒಳ ಉಡುಪುಗಳನ್ನು ಕದಿಯುವುದು ನಡೆದಿದೆ. ಇದರಿಂದ ಆತಂಕ್ಕೆ ಒಳಗಾಗಿರುವ ಜನತೆ ರಾಜ ಗೋಪಾಲನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆದಷ್ಟು ಬೇಗ ಅನಾಮಿಕ ವಿಕೃತ ಕಾಮಿಯನ್ನು ಬಂಧಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.