ಐಷಾರಾಮಿ ದಿಲ್ಲಿ ಚೋರರು ಅಂದರ್

285

ಪ್ರಜಾಸ್ತ್ರ ಅಪರಾಧ ಸುದ್ದಿ

ಬೆಂಗಳೂರು: ಸಿಲಿಕಾನ್ ಸಿಟಿ ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಆರು ಜನ ಖತರ್ನಾಕ್ ಕಳ್ಳರು ದೆಹಲಿ ಮೂಲದವರಾಗಿದ್ದಾರೆ. ದೆಹಲಿಯಿಂದ ಬೆಂಗಳೂರಿಗೆ ಬಂದು ಸರಗಳ್ಳತನ ಮಾಡ್ತಿದ್ದ ಇವರನ್ನ ಈಶಾನ್ಯ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಹಸೀನ್ ಖಾನ್, ಸಲೀಂ, ಹ್ಯಾರೀಸ್, ಸುರೇಶಕುಮಾರ, ಇರ್ಷಾದ್ ಹಾಗೂ ಅಪ್ರೋಸ್ ಅನ್ನೋ 6 ಜನರನ್ನ ಬಂಧಿಸಲಾಗಿದೆ. ಫೆಬ್ರವರಿ 16ರಂದು ಸಂಪಿಗೆಹಳ್ಳಿ, ಬಾಗಲೂರು, ಯಲಹಂಕ ಸೇರಿದಂತೆ ಸುಮಾರು 8 ಕಡೆ ಸರಗಳ್ಳತನ ನಡೆಸಲಾಗಿತ್ತು. ಒಂದೇ ದಿನ ಇಷ್ಟೊಂದು ಸರಗಳ್ಳತನ ಪ್ರಕರಣ ನಡೆದ್ರಿಂದ ಪೊಲೀಸರು ತನಿಖೆಯನ್ನ ಚುರುಕುಗೊಳಿಸಿದ್ರು.

ಸಿಸಿಟಿವಿ ದೃಶ್ಯಗಳ ಮೂಲಕ ಕಳ್ಳರನ್ನ ಪತ್ತೆ ಹಚ್ಚಲಾಗಿದೆ. ದೇವನಹಳ್ಳಿ ವಿಲ್ಲಾವೊಂದರಲ್ಲಿ ಮೂವರು ಸಿಕ್ಕಿಬಿದ್ದಿದ್ದಾರೆ. ಬಳಿಕ ಉಳಿದ ಮೂವರ ಬಗ್ಗೆ ಬಾಯಿಬಿಡಿಸಿ ಒಟ್ಟು 6 ಜನರನ್ನ ಬಂಧಿಸಲಾಗಿದೆ. ವಿಮಾನದಲ್ಲಿ ಬಂದು ವಿಮಾನದಲ್ಲಿ ಹೋಗ್ತಿದ್ದ ಐಷಾರಾಮಿ ಕಳ್ಳರು ಇವರು. ದೆಹಲಿಯಲ್ಲಿ 26 ಪ್ರಕರಣಗಳು ಇವರ ಮೇಲೆ ಇರುವುದು ತಿಳಿದು ಬಂದಿದೆ.




Leave a Reply

Your email address will not be published. Required fields are marked *

error: Content is protected !!