ಮಗುವಿನ ಜೀವ ಉಳಿಸಲು ಆಸ್ಪತ್ರೆಗೆ ಬಂದ ನವಜೋಡಿ

353

ಪ್ರಜಾಸ್ತ್ರ ಸುದ್ದಿ

ಲಖ್ನೋ: ಯಾರದೋ ಒಬ್ಬರ ಜೀವ ಉಳಿಯುತ್ತೆ ಸಹಾಯ ಮಾಡಿ ಅಂದ್ರೆ ಮುಂದೆ ಬರುವವರ ಸಂಖ್ಯೆ ಕಡಿಮೆ. ಹಾಗಂತ ಒಳ್ಳೆಯವರು ಇಲ್ಲವೆಂದು ಅಲ್ಲ. ಅಂತವರ ಸಂಖ್ಯೆ ಕಡಿಮೆ. ಆ ಕಡಿಮೆ ಸಂಖ್ಯೆಯಲ್ಲಿ ಈ ರೀತಿಯ ಜನರು ಇರ್ತಾರೆ. ಮಗುವೊಂದರ ಜೀವ ಉಳಿಸಲು ಹಸೆಮಣೆ ಏರಿದ ಬಳಿಕ ನೇರವಾಗಿ ಆಸ್ಪತ್ರೆಗೆ ಬಂದಿದೆ ಈ ಜೋಡಿ.

ಉತ್ತರ ಪ್ರದೇಶದ ಪೊಲೀಸ್ ಕಾನ್ಸ್ ಟೇಬಲ್ ವೊಬ್ಬರು ಪೊಲೀಸ್ ಮಿತ್ರಾ ಅನ್ನೋ ಅಭಿಯಾನದ ಮೂಲಕ ತುರ್ತಾಗಿ ರಕ್ತ ಬೇಕಾದವರಿಗೆ ಒದಗಿಸುವ ಕೆಲಸ ಮಾಡ್ತಿದ್ದಾರೆ. ಆಶಿಶ ಮಿಶ್ರಾ ಅವರ ಕರೆಗೆ ಸ್ಪಂದಿಸಿದ ನವಜೋಡಿ ಮದುವೆ ಮಂಟಪದಿಂದ ಸೀದಾ ಆಸ್ಪತ್ರೆಗೆ ಬಂದ ರಕ್ತದಾನ ಮಾಡಿದೆ. ಇದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.




Leave a Reply

Your email address will not be published. Required fields are marked *

error: Content is protected !!