ಪ್ರಜಾಸ್ತ್ರ ಸುದ್ದಿ
ಮಂಗಳೂರು: ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕಿಡಿ ಕಾರಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಎಸ್ ಡಿಪಿಐ, ಪಿಎಫ್ಐ ಬೆಳಸ್ತಿರುವುದೇ ಬಿಜೆಪಿ. ಇವುಗಳು ಬಿಜೆಪಿಯ ಬಿ ಟೀಂ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಎಸ್ ಡಿಪಿಐ, ಪಿಎಫ್ಐ ವಿರುದ್ಧ ಹಲವು ಪ್ರಕರಣಗಳಿವೆ. ಅವುಗಳನ್ನ ಬ್ಯಾನ್ ಮಾಡುತ್ತಿಲ್ಲ. ಅವುಗಳ ರ್ಯಾಲಿಗೆ ಒಪ್ಪಿಗೆ ಕೊಡ್ತಿರುವುದು ಯಾರು? ಎಸ್ ಡಿಪಿಐ ಬೆಳಸ್ತಿರುವುದೇ ಬಿಜೆಪಿ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.