ಪ್ರಜಾಸ್ತ್ರ ಸುದ್ದಿ
ಶ್ರೀಶೈಲಂ: ಆಂಧ್ರದ ಶ್ರೀಶೈಲದಲ್ಲಿ ಕನ್ನಡಿಗರು ಹಾಗೂ ಸ್ಥಳೀಯರ ಜೊತೆಗೆ ದೊಡ್ಡ ಗಲಾಟೆ ನಡೆದ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಕಾರಣವಾಗಿದ್ದು ನೀರಿನ ಬಾಟಲಿಗೆ ಹೆಚ್ಚಿನ ಹಣ ಪಡೆದಿದ್ದು ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಗಲಾಟೆ ನಡೆದಿದೆ.
ಕರ್ನಾಟಕ 200ಕ್ಕೂ ಹೆಚ್ಚು ವಾಹನಗಳು ಜಖಂಗೊಂಡಿವೆ. ಬಾಗಲಕೋಟೆ ಮೂಲದ ಶ್ರೀಶೈಲ ವಾರಿಮಠ(28) ಅನ್ನೋ ವ್ಯಕ್ತಿಗೆ ಗಂಭೀರ ಗಾಯಗಳಾಗಿದ್ದು, ಇವರ ಕುಟುಂಬ ಆತಂಕದಲ್ಲಿದೆ. ಆದರೆ, ಯಾವುದೇ ವದಂತಿಗೆ ಕಿವಿಗೊಡಬೇಡಿ ಎಂದು ಬಾಗಲಕೋಟೆ ಎಸ್ಪಿ ಹೇಳಿದ್ದಾರೆ.
ರಾಜ್ಯದ ವಿಜಯಪುರ, ಬಾಗಲಕೋಟೆ, ಕಲಬುರಗಿ, ಯಾದಗಿರಿ, ರಾಯಚೂರು ಭಾಗದ ಭಕ್ತರು ಪ್ರತಿವರ್ಷ ಅಪಾರ ಸಂಖ್ಯೆಯಲ್ಲಿ ಶ್ರೀಶೈಲಕ್ಕೆ ತೆರಳುತ್ತಾರೆ. ಅಷ್ಟೋ ಭಕ್ತರು ಕಾಲ್ನಡಿಗೆಯ ಮೂಲಕ ಸುಮಾರು 10 ದಿನಗಳಿಗೂ ಹೆಚ್ಚು ಕಾಲ ಪ್ರಯಾಣ ಮಾಡುತ್ತಾರೆ. ಇಂದಿನಿಂದ ಐದು ದಿನಗಳ ಕಾಲ ಮುಟ್ಟು ದರ್ಶನ ನಡೆಯುತ್ತೆ.