ನೌಕರಿ ಕಳೆದುಕೊಳ್ಳುವ ಭೀತಿ: ವಿದ್ಯಾಕಾಶಿಯಲ್ಲಿ ಮೂವರ ಆತ್ಮಹತ್ಯೆ!

354

ಪ್ರಜಾಸ್ತ್ರ ಸುದ್ದಿ

ಧಾರವಾಡ: ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ನಗರದ ಕವಳಿಕಾಯಿ ಚಾಳದಲ್ಲಿ ನಡೆದಿದೆ. 36 ವರ್ಷದ ಮೌನೇಶ ಪತ್ತಾರ, ಪತ್ನಿ 28 ವರ್ಷದ ಅರ್ಪಿತಾ, 2 ವರ್ಷದ ಮಗಳು ಸುಕೃತಾ ಮೃತ ದುರ್ದೈವಿಗಳು ಎಂದು ತಿಳಿದು ಬಂದಿದೆ.

ಮಾರ್ಕ್ ಪೋಲೋ ಕಂಪನಿಯಲ್ಲಿ ಉದ್ಯೋಗ ಮಾಡ್ತಿದ್ದ ಮೌನೇಶ, ಕರೋನಾ ಮಹಾಮಾರಿಯಿಂದ ನೌಕರಿ ಕಳೆದುಕೊಳ್ಳುವ ಭೀತಿಯಿಂದ, ಹೆಂಡ್ತಿ, ಮಗಳಿಗೆ ವಿಷಕೊಟ್ಟು ತಾನು ನೇಣಿಗೆ ಶರಣಾಗಿದ್ದಾನೆ.

ಮೂಲತಃ ಗದಗ ಜಿಲ್ಲೆ ರೋಣ ತಾಲೂಕಿನ ಅಸೂಟಿ ಗ್ರಾಮದ ಮೌನೇಶ ಪತ್ತಾರ ಮಾರ್ಕ್ ಪೋಲೊದಲ್ಲಿ ಕಾರ್ಯನಿರ್ವಹಿಸುತ್ತಿದ್ದ. ಮಡದಿ ಅರ್ಪಿತಾ ಹಾಗೂ ಎರಡು ವರ್ಷದ ಮಗಳು ಶುಕೃತಾಳಿಗೆ ಮಲಗುವ ಸಮಯದಲ್ಲಿ ವಿಷ ನೀಡಿದ್ದಾನೆ.  ಅವರ ಸಾವಿನ ನಂತರ ನೇಣಿಗೆ ಶರಣಾಗಿದ್ದಾನೆ ಎನ್ನಲಾಗ್ತಿದೆ.

ಮಾರ್ಕ್ ಪೋಲೊ ಕಂಪನಿಯಲ್ಲಿ 34 ಜನರಿಗೆ ಕರೋನಾ ಪಾಸಿಟಿವ್ ಬಂದಿತ್ತು. ಕರೋನಾ ನಡುವೆ ಕಂಪನಿಯಲ್ಲಿ ಸಂಬಳ ಕಡಿತ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ. ಇದೇ ಆತ್ಮಹತ್ಯೆಗೆ ಕಾರಣವಾಯ್ತಾ ಅನ್ನೋ ಸಂಶಯ ಬಂದಿದೆ. ಉಪನಗರ ಠಾಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




Leave a Reply

Your email address will not be published. Required fields are marked *

error: Content is protected !!