ನಟನಾಗಿ ಶುಭ ಕೋರಿದ್ದೇನೆ: ನಿಖಿಲ ಕುಮಾರಸ್ವಾಮಿ

327

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ನಟ, ಜನತಾದಳ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ ಕುಮಾರಸ್ವಾಮಿ ವಿರುದ್ಧ, ಅವರದೆ ಪಕ್ಷದ ಕಾರ್ಯಕರ್ತರು ತಿರುಗಿ ಬಿದ್ದಿದ್ದಾರೆ. ಕಾರಣ, ನಿರ್ಮಾಪಕ ಮುನಿರತ್ನ ಅವರಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದ್ದಕ್ಕೆ ಕಿಡಿ ಕಾರಿದ್ದಾರೆ.

ಮುನಿರತ್ನ ಅವರು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಟೈಂನಲ್ಲಿ ಬಿಜೆಪಿ ಸಂಗ ಮಾಡಿದ್ರು. ಹೀಗಾಗಿ ಹೆಚ್ಡಿಕೆಗೆ ದ್ರೋಹ ಮಾಡಿದವರಿಗೆ ಶುಭ ಕೋರಬಾರದಿತ್ತು ಎಂದು ವಾಗ್ದಾಳಿ ನಡೆಸಿದ್ದಾರೆ. ಇದಕ್ಕೆ ಉತ್ತರಿಸಿರುವ ನಿಖಿಲ, ನಾನು ನಟನಾಗಿ ಅವರಿಗೆ ಶುಭ ಕೋರಿದ್ದೇನೆ. ಯುವ ಘಟಕದ ಅಧ್ಯಕ್ಷನಾಗಿ ಅಲ್ಲ ಎಂದಿದ್ದಾರೆ.

ರಾಜಕೀಯ ಸಂಘರ್ಷ ಮೀರಿ ಪ್ರಧಾನಿ ದೇವೇಗೌಡರಿಗೆ, ದೇವೇಗೌಡರು ಪ್ರಧಾನಿಗೆ ಶುಭ ಕೋರುತ್ತಾರೆ. ಕುಮಾರಸ್ವಾಮಿ ಅವರು ಸಿಎಂಗೆ ಶುಭ ಕೋರುತ್ತಾರೆ. ಅವರು ಇವರಿಗೆ ಶುಭ ಕೋರುತ್ತಾರೆ. ಹೀಗಾಗಿ ನನ್ನ ಶುಭಕೋರಿಕೆಯಲ್ಲಿ ತಪ್ಪು ಇರಲಿಕ್ಕಿಲ್ಲ ಎಂದು ಹೇಳಿದ್ದಾರೆ.




Leave a Reply

Your email address will not be published. Required fields are marked *

error: Content is protected !!