ಇಂಡಿ ಚಿನ್ನದ ವ್ಯಾಪಾರಿಗೆ ಧಮ್ಕಿ ಕೇಸ್ ಗೆ ಟ್ವಿಸ್ಟ್: ವಿಡಿಯೋದಲ್ಲಿ ಹೇಳಿದ್ದೇನು?

538

ಪ್ರಜಾಸ್ತ್ರ ಸುದ್ದಿ

ಇಂಡಿ: ಚಿನ್ನದ ವ್ಯಾಪಾರಿ ನಾಮದೇವ ಡಾಂಗೆಗೆ ಧಮ್ಕಿ ಹಾಕಿ 5 ಕೋಟಿ ರೂಪಾಯಿ ಅಥವ ಬಂಗಾರ ನೀಡುವಂತೆ ಕೇಳಿದ್ದಾರೆ ಎಂದು ನೀಡಿದ್ದ ದೂರಿಗೆ ಇದೀಗ ಟ್ವಿಸ್ಟ್ ಸಿಕ್ಕಿದೆ.

ಪ್ರಕರಣದ A1 ಆರೋಪಿ ಲಕ್ಷ್ಮಿಕಾಂತ ಪಾಟೀಲ, ವಿಜಯಪುರದ ಅಜ್ಞಾತ ಸ್ಥಳದಿಂದ ವಿಡಿಯೋ ಬಿಡುಗಡೆ ಮಾಡುವ ಮೂಲಕ, ಈ ಪ್ರಕರಣದಲ್ಲಿ ನಾನು ನಿರಾಪರಾಧಿ ಎಂದಿದ್ದಾರೆ. ಭಾಗಪ್ಪ ಹರಿಜನ, ಮಹಾದೇವ ಸಾಹುಕಾರ್ ಬೈರಗೊಂಡ ಮತ್ತು ನಾನು ಡಾಂಗೆಗೆ ಯಾವುದೇ ಧಮ್ಕಿ ಹಾಕಿಲ್ಲ ಎಂದಿದ್ದಾರೆ.

ನಾಮದೇವ ಡಾಂಗೆಯ ಆಸ್ತಿ ಮಾರಿದ್ರೂ 5 ಕೋಟಿನೂ ಬರೋದಿಲ್ಲ. ನನಗೆ ಸುಟ್ರೂ ಸುಡಲಾರದಷ್ಟು ಆಸ್ತಿ ಇದೆ. ಭಾಗಪ್ಪ ಹರಿಜನ ಮತ್ತು ನಾಮದೇವ ಡಾಂಗೆಯ ವ್ಯವಹಾರ ಇದು. ಇದರಲ್ಲಿ ಡಾಂಗೆಗೆ ಬುದ್ಧಿವಾದ ಹೇಳಿದಕ್ಕೆ ನನ್ನ ಹೆಸರು ಬಂದಿದೆ. ಈ ಕೇಸ್ ಗೂ ನನಗೂ ಯಾವುದೇ ಸಂಬಂಧವಿಲ್ಲವೆಂದು ವಿಡಿಯೋ ಮೂಲಕ ತಿಳಿಸಿದ್ದಾರೆ. ಹೀಗಾಗಿ ಈ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.




Leave a Reply

Your email address will not be published. Required fields are marked *

error: Content is protected !!