ದೇವರಹಿಪ್ಪರಗಿ: ವಿಜಯಪುರ-ಕಲಬುರಗಿ ಮಾರ್ಗದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಢಾಬಾವೊಂದರಲ್ಲಿ ವ್ಯಕ್ತಿಯೊಬ್ಬ ನೇಣಿಗೆ ಶರಣಾಗಿದ್ದಾನೆ. ಸುಮಾರು 28 ವರ್ಷದ ಶಿವಯ್ಯ ಶರಣಯ್ಯ ಸದಯ್ಯನಮಠ ಅನ್ನೋ ವ್ಯಕ್ತಿ ಢಾಬಾದಲ್ಲಿಯೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ವಿಜಯಪುರ ಜಿಲ್ಲೆ ದೇವರಹಿಪ್ಪರಗಿ ತಾಲೂಕಿನ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದೆ. ಸ್ಥಳಕ್ಕೆ ಪಿಎಸ್ಐ ರವಿಕುಮಾರ ಯಡಳ್ಳಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಮದುವೆ ಸಮಾರಂಭಗಳಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ. ಈತನಿಗೆ ಹೆಂಡತಿ ಹಾಗೂ ಮೂವರು ಗಂಡು ಮಕ್ಕಳಿದ್ದಾರೆ. ಈ ಸಂಬಂಧ ದೇವರಹಿಪ್ಪರಗಿ ತಾಲೂಕಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ಹಿನ್ನೆಲೆ
ಶಿವಯ್ಯ ಕುಡಿಯಲು ರಾತ್ರಿ ಢಾಬಾಕ್ಕೆ ಬಂದಿದ್ದಾನೆ. ಕುಡಿದು ಅಲ್ಲಿಯೇ ಮಲಗಿದ್ದಾನೆ. ಢಾಬಾದವರು ಹೋಗಿರಬೇಕೆಂದುಕೊಂಡು ಸುಮ್ಮನ್ನಾಗಿದ್ದಾರೆ. ನಸುಕಿನ ಟೈಂನಲ್ಲಿ ಮನೆಗೆ ಫೋನ್ ಮಾಡಿ ಕನ್ನೊಳ್ಳಿ ಗ್ರಾಮದಲ್ಲಿ ಹಿಡಿದಿದ್ದ ಊಟದ ಆರ್ಡರ್ ಕ್ಕೆ ಹೋಗುತ್ತೇನೆಂದು ಹೇಳಿದ್ದಾನೆ. ಹೀಗೆ ಹೇಳಿದವನು ಅದೇನಾಗಿದೆಯೋ ಏನೋ ಅಲ್ಲಿಯೇ ಲುಂಗಿಯಿಂದ ನೇಣು ಹಾಕಿಕೊಂಡಿದ್ದಾನೆ. ಬೆಳಗ್ಗೆ ಸುಮಾರು 9 ಗಂಟೆ ಟೈಂನಲ್ಲಿ ಢಾಬಾ ಕೆಲಸದ ಹುಡ್ಗರು ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ ಅನ್ನೋದು ಸ್ಥಳೀಯರು ಹೇಳಿದ ಮಾತುಗಳು. ಆತ್ಮಹತ್ಯೆಗೆ ಕಾರಣ ಏನೆಂದು ತಿಳಿದು ಬಂದಿಲ್ಲ.