ಪ್ರಜಾಸ್ತ್ರ ಸುದ್ದಿ
ಮಂಗಳೂರು: ಭಾನುವಾರ ಮನೆ ತುಂಬಾ ಮದುವೆಯ ಸಂಭ್ರಮ ಸಡಗರ. ಹೊಸ ಜೀವನಕ್ಕೆ ಕಾಲಿಟ್ಟ ಮಧುಮಗಳ ಮುಖದಲ್ಲಿಯೂ ನಗು ಚೆಲ್ಲಿತ್ತು. ಇಂದು(ಸೋಮವಾರ) ಅದೆ ಮಧುಮಗಳು ಬಾರದ ಲೋಕಕ್ಕೆ ಹೋಗಿದ್ದಾಳೆ. ಫೆಬ್ರವರಿ 28, ಭಾನುವಾರ ಮದುವೆಯಾಗಿದ್ದ ಯುವತಿ ಸೋಮವಾರ ಬೆಳಗ್ಗೆ ಹೃದಯಾಘಾತದಿಂದ ಮೃತಪಟ್ಟಿದ್ದಾಳೆ.
ಅಡ್ಯಾರ್ ಕಣ್ಣೂರು ಹತ್ತಿರದ ಬೀರ್ಪುಗುಡ್ಡೆ ಜಮಾಅತ್ ಅಧ್ಯಕ್ಷ ಅಬ್ದುಲ್ ಕರೀಂ ಹಾಜಿ ಎಂಬುವರ ಮಗಳು ಲೈಲಾ ಆಫಿಯಾ(23) ಸೋಮವಾರ ಮುಂಜಾನೆ ಹೃದಯಾಘಾತದಿಂದ ಮೃತಪಟ್ಟಿದ್ದಾಳೆ. ಕಣ್ಣೂರಿನ ಮುಬಾರಕ್ ಎಂಬಾತನ ಜೊತೆ ಭಾನುವಾರವಷ್ಟೇ ಮದುವೆ ಆಗಿತ್ತು. ಸಂಭ್ರಮದ ಮನೆಯಲ್ಲಿ ಇದೀಗ ನೀರವ ಮೌನ ಆವರಿಸಿಕೊಂಡಿದೆ.