ಸಿಂದಗಿ ಪುರಸಭೆ ಭ್ರಷ್ಟಾಚಾರಿಗಳ ಕೂಪ: ಶಿವಾನಂದ ಆಲಮೇಲ

435

ಪ್ರಜಾಸ್ತ್ರ ಸುದ್ದಿ

ಸಿಂದಗಿ: ವಿಜಯಪುರ ಜಿಲ್ಲೆಯ ಸಿಂದಗಿ ಪುರಸಭೆಯ ಭ್ರಷ್ಟ ಅಧಿಕಾರಿಗಳ ವಿರುದ್ಧ ದಲಿತ ಸೇನೆ ಹಾಗೂ ಬೀದಿ ವ್ಯಾಪಾರಸ್ಥರ ಚುನಾಯಿತ ಪ್ರತಿನಿಧಿಗಳು ಪ್ರತಿಭಟನೆ ನಡೆಸಿದ್ರು. ಪುರಸಭೆ ಅಧಿಕಾರಿಗಳು ಸಂಪೂರ್ಣವಾಗಿ ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡಿದ್ದು, ಹಗರಣಗಳ ಮೇಲೆ ಹಗರಣಗಳನ್ನ ಮಾಡುತ್ತಿದ್ದಾರೆ. 2017-18ನೇ ಸಾಲಿನ ಪುರಸಭೆ ಕಾರ್ಯಾಲಯ ಕಟ್ಟಡ ಕಾಮಗಾರಿಗಾಗಿ ಮಂಜೂರಾದ 50 ಲಕ್ಷ ರೂಪಾಯಿ ಸಂಪೂರ್ಣವಾಗಿ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಲಾಯ್ತು.

ಈ ವೇಳೆ ಮಾತ್ನಾಡಿದ ದಲಿತ ಸೇನೆಯ ತಾಲೂಕಾಧ್ಯಕ್ಷ ಶಿವಾನಂದ ಆಲಮೇಲ, ಖಾತಾ ಬದಲಾವಣೆ ಮಾಡುವ ಮೂಲಕ ಎಲ್ಲ ಅಧಿಕಾರಿಗಳು ಭ್ರಷ್ಟಾಚಾರ ನಡೆಸಿದ್ದಾರೆ ಅನ್ನೋ ಗಂಭೀರ ಆರೋಪ ಮಾಡಿದ್ರು.

ದಲಿತ ಸೇನೆ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಂತೋಷ ಪೂಜಾರಿ ಮಾತ್ನಾಡಿ, ಪುರಸಭೆಯಲ್ಲಿ ಖಾಯಂ ನೌಕರರು ಇಲ್ಲ. ಗುತ್ತಿಗೆ ನೌಕರರು ಹಾಗೂ ಏಜೆಂಟರ್ ಹಾವಳಿ ಮಿತಿಮೀರಿದೆ. ಖಾತೆ ಬದಲಾವಣೆ ಮಾಡುತ್ತಾ ಲೂಟಿ ಮಾಡ್ತಿದ್ದಾರೆ ಎಂದು ಆರೋಪಿಸಿದ್ರು. ಇನ್ನು ಬಂದೇನವಾಜ ಶಾಹಪೂರ, ಅಬೂಬಕರ್ ಮಾತ್ನಾಡಿ, ನಕಲಿ ಬಿಲ್ ಗಳು ಎಗ್ಗಿಲ್ಲದೆ ನಡೆಯುತ್ತಿವೆ. ಗೋಲ್ಮಾಲ್ ನಡೆಸಿರುವ ಅಧಿಕಾರಿಗಳ ವರ್ಗಾವಣೆಗೆ ಆಗ್ರಹಿಸಿದ್ರು.

ಈ ವೇಳೆ ದಲಿತ ಸೇನಾ ಸಂಘಟನಾ ಕಾರ್ಯದರ್ಶಿ ಶರಣು ಬ್ಯಾಕೋಡ, ನಗರ ಘಟಕ ಅಧ್ಯಕ್ಷ ಅಜಿತ ಚೌರ, ಭೀಮು ಚೌರ, ಸೇರಿದಂತೆ ಹಲವರು ಭಾಗವಹಿಸಿದ್ರು.




Leave a Reply

Your email address will not be published. Required fields are marked *

error: Content is protected !!