ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಅವಕಾಶ ಸಿಕ್ರೆ ಬಿಗ್ ಬಾಸ್ ರಿಯಾಲಿಟಿ ಶೋಗೆ ಹೋಗುತ್ತೇನೆ ಎಂದು ಎಂಎಲ್ ಸಿ ಹೆಚ್.ವಿಶ್ವನಾಥ ಹೇಳಿದ್ದಾರೆ. ವಿಶೇಷ ಆಹ್ವಾನಿತರಾಗಿ ನಾಲ್ಕೈದು ದಿನದ ಮಟ್ಟಿಗೆ ಆಹ್ವಾನ ನೀಡಿದ್ರೆ ಹೋಗುತ್ತೇನೆ ಎಂದಿದ್ದಾರೆ.
ಸೀಸನ್ 6ರಲ್ಲೇ ಹೆಚ್.ವಿಶ್ವನಾಥ ಅವರನ್ನ ಆಹ್ವಾನಿಸಲಾಗಿತ್ತು ಎಂದು ಹೇಳಿದ್ದಾರೆ. ಅದಕ್ಕೆ ಅವರು ಸಹ ಒಪ್ಪಿಕೊಂಡಿದ್ರಂತೆ. ಆದ್ರೆ, ಅನಾರೋಗ್ಯದಿಂದ ಹೋಗಲು ಆಗಿರ್ಲಿಲ್ಲ. ಇದೀಗ ಸ್ನೇಹಿತರು ಹೋಗಿ ಬನ್ನಿ ಎನ್ನುತ್ತಿದ್ದಾರೆ. ಚುನಾವಣೆ ಬರುತ್ತಿವೆ. ಅದರ ಜವಾಬ್ದಾರಿ ನೀಡ್ತಾರೆ. ಹೀಗಾಗಿ ವಿಶೇಷ ಆಹ್ವಾನಿತರು ಆದರೆ ಹೋಗಿ ಬರಬಹುದು ಎಂದಿದ್ದಾರೆ.