ಪ್ರಜಾಸ್ತ್ರ ಸುದ್ದಿ
ರಾಯಚೂರು: ಪಥ ಬದಲಿಸುವ ಕಾಲಯಕ್ಕೆ ಮಂತ್ರಲಾಯದ ರಾಘವೇಂದ್ರ ಸ್ವಾಮಿಗಳ ದರ್ಶನ ಮಾಡುತ್ತಿದ್ದೇನೆ ಎಂದು ಹೇಳುವುದರ ಜೊತೆಗೆ ಕಾಂಗ್ರೆಸ್ ಮರು ಸೇರ್ಪಡೆಯಾಗುತ್ತಿದ್ದೇನೆ ಎಂದು ಎಂಎಲ್ಸಿ ಎಚ್.ವಿಶ್ವನಾಥ್ ಹೇಳಿದರು.
ನನ್ನ ರಕ್ತಾನೆ ಕಾಂಗ್ರೆಸ್ ರೀ. ಹೌದು ನಾನು ಕಾಂಗ್ರೆಸ್ ಪಕ್ಷವನ್ನು ಸೇರುತ್ತೇನೆ. ರಾಜಕಾರಣ ಒಂದು ಕುಟುಂಬ. ಅಣ್ಣ, ತಮ್ಮ ಮುನಿಸಿಕೊಂಡು ಹೊರಗೆ ಹೋಗುತ್ತಾರೆ ವಾಪಸ್ ಬರುತ್ತಾರೆ ಎನ್ನುವ ಮೂಲಕ ತಮ್ಮ ಸೇರ್ಪಡೆ ಖಚಿತ ಪಡಿಸಿದರು.
ಸಿದ್ದರಾಮಯ್ಯ ನಾನು ಒಟ್ಟಿಗೆ ಬೆಳೆದವರು. ಅವರು ಈಗ ಕೋಲಾರದಲ್ಲಿ ಸ್ಪರ್ಧೆ ಮಾಡಬೇಕು ಎಂದು ಬಯಸಿದ್ದಾರೆ. ಅಲ್ಲಿ ಜನರ ಪ್ರೀತಿ, ವಿಶ್ವಾಸಕ್ಕೆ ಸ್ಪರ್ಧೆಗೆ ಮುಂದಾಗಿದ್ದಾರೆ. ಮತದಾರರ ತೀರ್ಮಾನ ಅಂತಿಮವಾಗಿರುತ್ತೆ. ಇನ್ನು ನಾನು ಸಾಹಿತ್ಯ ಕ್ಷೇತ್ರದಿಂದ ಎಂಎಲ್ಸಿ ಆಗಿದ್ದೇನೆ. ಬಿಜೆಪಿ ಪಕ್ಷದಿಂದ ಅಲ್ಲ. ರಾಜ್ಯಪಾಲರು ಬಿಜೆಪಿಯಿಂದ ರಾಜೀನಾಮೆ ಪಡೆದ ಬಳಿಕ ನಾಮಿನೇಟ್ ಮಾಡಿದ್ದಾರೆ. ಹೀಗಾಗಿ ನಾನು ಸ್ವತಂತ್ರ ಎಂದರು.