ಪ್ರಜಾಸ್ತ್ರ ಸುದ್ದಿ
ಮೈಸೂರು: ಸಿಎಂ ಸ್ಥಾನದಿಂದ ಯಡಿಯೂರಪ್ಪನವರನ್ನ ಕೆಳಗಿಳಿಸಲು ಪ್ರಯತ್ನ ನಡೆಯುತ್ತಿದೆ. ಇದಕ್ಕೆ ಸ್ವಾಮೀಜಿಗಳು ವಿರೋಧ ವ್ಯಕ್ತಪಡಿಸಿದ್ದು, ಬಿಎಸ್ವೈ ಪರ ನಾವು ನಿಲ್ಲುವುದಾಗಿ ಹೇಳಿದ್ದಾರೆ. ಇದಕ್ಕೆ ಎಲ್ಲಡೆಯಿಂದ ವಿರೋಧ ಸಹ ವ್ಯಕ್ತವಾಗಿದೆ. ಈ ಬಗ್ಗೆ ಮಾತ್ನಾಡಿರುವ ಎಂಎಲ್ ಸಿ ಹೆಚ್.ವಿಶ್ವನಾಥ, ಮಠಮಾನ್ಯಗಳು ಒಂದು ಪಕ್ಷ, ಒಬ್ಬ ವ್ಯಕ್ತಿ ಪರವಾಗಿ ನಿಲ್ಲಬಾರದು ಎಂದಿದ್ದಾರೆ.
ನಿಮ್ಮಿಂದ 104 ಸ್ಥಾನ ಬಂದಿಲ್ಲ. ಮೋದಿಯಿಂದ ಬಂದಿವೆ. ನಾವು 17 ಜನ ಬಿಜೆಪಿಗೆ ಬಂದೇವು. ನಾವ್ಯಾರೂ ವೀರಶೈವ ಲಿಂಗಾಯತರಲ್ಲ. ಬೇರೆ ಬೇರೆ ಸಮುದಾಯಕ್ಕೆ ಸೇರಿದವರು. ನೀವೊಬ್ಬರೆ ಪಕ್ಷ ಕಟ್ಟಿಲ್ಲ. ಎಲ್ಲರೂ ಸೇರಿ ಪಕ್ಷ ಕಟ್ಟಿದ್ದಾರೆ. ನೀವು ಅಧಿಕಾರಕ್ಕೆ ತೆಗೆದುಕೊಂಡು ಬಂದೀರಿ. ಜನರ ಹಿತದೃಷ್ಟಿಯಿಂದ ಗೌರವಯುತವಾಗಿ ನಿರ್ಗಮಿಸಿ ಎಂದು ಹೇಳಿದೆ. ಇದನ್ನ ಮಠಾಧೀಶರು ಕೆಡಿಸುವ ಕೆಲಸ ಮಾಡ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ರು.
ಎರಡು ಬಾರಿ ನಿಮಗೆ ಸರಿಯಾದ ನಿರ್ಗಮನ ಸಿಗ್ಲಿಲ್ಲ. ಈ ಬಾರಿಯೂ ಹಾಗೇ ಮಾಡಿಕೊಳ್ಳಬೇಡಿ. ಸ್ವಯಂಕೃತ ಅಪರಾಧದಿಂದ ಜೈಲಿಗೆ ಹೋಗಿ ಬಂದಿರಿ. ಬಿಜೆಪಿ ನಿಮ್ಗೆ 6 ವರ್ಷ ಉಚ್ಛಾಟನೆ ಮಾಡಿತು. ಆಗ ಕೆಜಿಪಿ ಕಟ್ಟಿದ್ರಿ. ಆಗ ಯಾರು ಬಂದರು? ಯಾವ ಮಠಾಧೀಶರು ನಿಮ್ಮ ಪರ ನಿಂತರು ಎನ್ನುವ ಮೂಲಕ ಸಿಎಂ ಸ್ಥಾನದಿಂದ ಗೌರವಯುತವಾಗಿ ಕೆಳಗೆ ಇಳಿಯಿರಿ ಅನ್ನೋ ಮಾತನ್ನ ಎಂಎಲ್ ಸಿ ಹೆಚ್.ವಿಶ್ವನಾಥ ಹೇಳಿದ್ದಾರೆ.