ಪ್ರಜಾಸ್ತ್ರ ಸುದ್ದಿ
ನವದೆಹಲಿ: ಚುನಾವಣೆ ಬಾಂಡ್ ಯೋಜನೆಯಿಂದ ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಮಾಹಿತಿ ಹಕ್ಕು ಉಲ್ಲಂಘನೆಯಾಗುತ್ತದೆ ಎಂದು ಹೇಳಿರುವ ಸುಪ್ರೀಂ ಕೋರ್ಟ್ ಅದನ್ನು ನಿಷೇಧಿಸಿದೆ. ಅನಾಮದೇಯ ಚುನಾವಣೆ ಬಾಂಡ್ ಅಸಂವಿಧಾನಿಕ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಹೇಳಿದ್ದಾರೆ.
ಬ್ಯಾಂಕ್ ಗಳು ಚುನಾವಣೆ ಬಾಂಡ್ ಗಳನ್ನು ಕೂಡಲೇ ನಿಲ್ಲಿಸಬೇಕು. ಈಗಾಗ್ಲೇ ನೀಡಿದ್ದರೆ ಅವುಗಳನ್ನು ವಾಪಸ್ ಪಡೆದು ವ್ಯಕ್ತಿಗಳು ಹಣ ಮರಳಿಸಬೇಕು ಎಂದು ತೀರ್ಪು ನೀಡಲಾಗಿದೆ. ಚುನಾವಣೆ ಬಾಂಡ್ ದಿಂದ ಮಾತ್ರ ಕಪ್ಪು ಹಣ ತಡೆಯಲು ಸಾಧ್ಯವಿಲ್ಲ. ಇದಕ್ಕೆ ಹಲವಾರು ಮಾರ್ಗಗಳಿವೆ ಎಂದು ತಿಳಿಸಲಾಗಿದೆ.