ನವದೆಹಲಿ: ಅತೃಪ್ತ ಶಾಸಕರು ಸಲ್ಲಿಸಿದ್ದ ಅರ್ಜಿ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಯಥಾಸ್ಥಿತಿ ಕಾಪಾಡಿಕೊಂಡು ಹೋಗಲು ಸೂಚಿಸಿದೆ. ಇದರ ಜೊತೆಗೆ ವಿಚಾರಣೆಯನ್ನ ಮಂಗಳವಾರಕ್ಕೆ ಮುಂದೂಡಲಾಗಿದೆ.
ಈ ಪ್ರಕರಣದಲ್ಲಿ ಸಾಂವಿಧಾನಾತ್ಮಕ ಅಂಶಗಳು ಸೇರಿಕೊಂಡಿವೆ. ಹೀಗಾಗಿ ಹೆಚ್ಚಿನ ವಿಚಾರಣೆ ಅಗತ್ಯೆವೆಂದು ರಂಜನ ಗೊಗಾಯ್ ಅವರ ನೇತೃತ್ವದ ತ್ರಿಸದಸ್ಯ ಪೀಠ ಅಭಿಪ್ರಾಯ ಪಟ್ಟಿದೆ. ಶಾಸಕರನ್ನ ಅನರ್ಹತೆ ಅಥವ ಅಂಗೀಕಾರ ಮಾಡಬೇಡಿ. ಇದನ್ನ ಯಥಾಸ್ಥಿತಿ ಕಾಪಾಡಿಕೊಂಡು ಹೋಗಿ ಅಂತಾ ತಿಳಿಸಿದೆ. ಹೀಗಾಗಿ ಇದರ ವಿಚಾರಣೆಯನ್ನ ಮಂಗಳವಾರಕ್ಕೆ ಮುಂದೂಡಲಾಗಿದೆ.