ಕೇರಳ: ಅಯ್ಯಪ್ಪನ ಸನ್ನಿಧಾನದಲ್ಲಿ ಭಕ್ತರ ಹರ್ಷೋದ್ಘಾರ ಮುಗಿಲು ಮುಟ್ಟಿದೆ. ಮಕರಜ್ಯೋತಿ ಕಂಡ ಲಕ್ಷಾಂತರ ಭಕ್ತರು ಸ್ವಾಮಿ ಅಯ್ಯಪ್ಪ.. ಶರಣಂ ಅಯ್ಯಪ್ಪ ಎಂದು ನಾಮಜಪ ಮಾಡುತ್ತಾ ತಮ್ಮ ಇಷ್ಟಾರ್ಥಗಳನ್ನ ಬೇಡಿಕೊಳ್ತಿದ್ದಾರೆ.
ತಿಂಗಳ ಕಾಲ ಮಾಲೆ ಹಾಕಿ ಕಠಿಣ ವೃತ ಮಾಡಿದ ಭಕ್ತರು ಶಬರಿಗಿರಿಯಲ್ಲಿ ಸೇರಿದ್ದಾರೆ. 18 ಮೆಟ್ಟಲುಗಳ ಮೇಲೆ ಆಸೀನನಾಗಿರುವ 18 ಗಿರಿ ವಾಸಿಯಾಗಿರುವ ಅಯ್ಯಪ್ಪ ಸ್ವಾಮಿಯ ಜ್ಯೋತಿಯನ್ನ ದರ್ಶನ ಪಡೆದು ಪುನೀತರಾಗಿದ್ದಾರೆ. ಇದಕ್ಕಾಗಿ ವರ್ಷಗಳ ಕಾಲ ಕಾಯುತ್ತಿದ್ದ ಭಕ್ತರು ಇದೀಗ ಮಕರಜ್ಯೋತಿ ಕಂಡು ಖುಷಿಯಾಗಿದ್ದಾರೆ.