ಪ್ರಜಾಸ್ತ್ರ ಸುದ್ದಿ
ಶಿವಮೊಗ್ಗ: ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಅವರ ಈಗಾಗ್ಲೇ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದಾರೆ. ಈ ವೇಳೆ ಸಾಕಷ್ಟು ಪರ ವಿರೋಧದ ಮಾತುಗಳು ಕೇಳಿ ಬಂದಿವೆ. ಈ ಬಗ್ಗೆ ಮಾತನಾಡಿರುವ ಶಿವಣ್ಣ, ನಾನೇನು ಸಣ್ಣ ಹುಡುಗನಲ್ಲ. ನನ್ನ ವಯಸ್ಸಿಗೂ ಮರ್ಯಾದೆ ಇದೆ ಎಂದಿದ್ದಾರೆ.
ಸಿನಿಮಾದಲ್ಲಿ ಡಿಮ್ಯಾಂಡ್ ಇರುವ ರೀತಿಯಲ್ಲಿ ಈಗ ಇಲ್ಲಿ ಶುರುವಾಗಿದೆ. ಬೇರೆ ಪಕ್ಷದವರು ಪ್ರಚಾರಕ್ಕೆ ಕರೆದರೂ ಹೋಗುತ್ತೇನೆ. ಆದರೆ, ಕರೆದಿಲ್ಲ. ವರುಣಾದಲ್ಲಿ ನಿನ್ನೆ ರ್ಯಾಲಿ ಚೆನ್ನಾಗಿ ಆಗಿದೆ. ಇವತ್ತು ಶಿರಿಸಿ, ನಾಳೆ ಹುಬ್ಬಳ್ಳಿ, ಇದರ ಜೊತೆಗೆ ಬೀದರ, ಬಸವ ಕಲ್ಯಾಣ, ಮಂಗಳೂರು, ಮುಂಡುಗೋಡಿಗೆ ಸಹ ಹೋಗುತ್ತೇನೆ.
ಎಲ್ಲ ಪಕ್ಷದಲ್ಲಿ ನನಗೆ ಸ್ನೇಹಿತರಿದ್ದಾರೆ. ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಇಂಪ್ರೆಸ್ ಆಗಿತ್ತು. ಅವರ ಫಿಟ್ನೆಸ್ ಇಷ್ಟವಾಗಿತ್ತು. ಹೋಗಿ ಭೇಟಿಯಾದೆ. ಸೋಮಣ್ಣ, ಪ್ರತಾಪ್ ಸಿಂಹ್ ನನ್ನ ಪರಿಚಯಸ್ಥರು. ಈಗ ಸುದೀಪ್ ಕೂಡಾ ಪ್ರಚಾರಕ್ಕೆ ಹೋಗುತ್ತಿದ್ದಾರೆ. ನಾಳೆ ನಾವು ಸಿಕ್ಕರೆ ಮಾತನಾಡುವುದಿಲ್ವಾ? ಇದು ವಾರ್ ಅಲ್ಲ. ಇದೊಂದು ಸ್ಪರ್ಧೆ ಅಷ್ಟೆ ಎಂದು ಹೇಳಿದರು.