ಅಫಜಲಪುರದಲ್ಲಿ 11 ಮುಖಂಡರನ್ನು ಉಚ್ಛಾಟಿಸಿದ ಬಿಜೆಪಿ

183

ಪ್ರಜಾಸ್ತ್ರ ಸುದ್ದಿ

ಕಲಬುರಗಿ: ಕರ್ನಾಟಕ ವಿಧಾನಸಭಾ ಚುನಾವಣೆ 2023ರ ಮತದಾನಕ್ಕೆ ಇನ್ನು ಕೇವಲ 5 ದಿನ ಬಾಕಿ ಉಳಿದಿದೆ. ಹೀಗಿರುವಾಗಲೇ ಬಿಜೆಪಿ ಅಫಜಲಪುರದಲ್ಲಿ 11 ಮುಖಂಡರನ್ನು ಉಚ್ಛಾಟಿಸಿದೆ. ಪಕ್ಷೇತರ ಅಭ್ಯರ್ಥಿ ನಿತಿನ್ ಗುತ್ತೇದಾರ್ ಪರ ಪ್ರಚಾರ ಮಾಡುತ್ತಿರುವವರನ್ನು ಉಚ್ಛಾಟಿಸಲಾಗಿದೆ.

ಬಿಜೆಪಿ ಅಭ್ಯರ್ಥಿ ಮಾಲೀಕಯ್ಯ ಗುತ್ತೇದಾರ್ ಪರ ಪ್ರಚಾರ ಮಾಡದೆ ಬಂಡಾಯವೆದ್ದು ಪಕ್ಷೇತರರಾಗಿ ಸ್ಪರ್ಧೆ ಮಾಡಿರುವ ಅವರ ಸಹೋದರ ನಿತಿನ್ ಗುತ್ತೇದಾರ್ ಪರ ಪ್ರಚಾರ ಮಾಡುತ್ತಿರುವ ಶಿವರಾಜ್ ಸಜ್ಜನ್, ವಿಶ್ವನಾಥ್ ರೇವೂರ್, ರಾಜು ಜಿಡ್ಡಗಿ ಸೇರಿದಂತೆ 11 ಮುಖಂಡರನ್ನು 6 ವರ್ಷಗಳ ಕಾಲ ಉಚ್ಛಾಟಿಸಲಾಗಿದೆ.

ಸಹೋದರರ ನಡುವೆ ನೇರಾನೇರ ಫೈಟ್ ನಡೆದಿದೆ. ಹೀಗಾಗಿ ಅಫಜಲಪುರ ಕಣದಲ್ಲಿ ಚುನಾವಣೆ ಕಾವು ಜೋರಾಗಿಯೇ ಇದೆ. ಅಣ್ಣ, ತಮ್ಮನ ನಡುವಿನ ಸ್ಪರ್ಧೆಯಲ್ಲಿ ಯಾರಿಗೆ ಗೆಲುವಿನ ಹಾರ ಬೀಳುತ್ತೆ ಅನ್ನೋ ಕುತೂಹಲ ಮೂಡಿದೆ.




Leave a Reply

Your email address will not be published. Required fields are marked *

error: Content is protected !!