ಪ್ರಜಾಸ್ತ್ರ ಸುದ್ದಿ
ವಿಜಯಪುರ: ಸಿಂದಗಿ ವಿಧಾನಸಭೆಯ ಉಪ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಜೋರಾಗುತ್ತಿದೆ. ರಾಜಕೀಯ ಬೆಳವಣಿಗೆಗಳು ಸಾಕಷ್ಟು ನಡೆಯುತ್ತಿವೆ. ಇದರ ನಡುವೆ ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿ ಎಂಎಲ್ ಸಿ ಅರುಣ್ ಶಹಾಪೂರ್ ಹೆಸರು ಇತ್ತು ಎನ್ನಲಾಗುತಿತ್ತು. ಆದರೆ, ಕೋರ್ ಕಮಿಟಿ ಹೈಕಮಾಂಡ್ ಗೆ ಶಿಫಾರಸು ಮಾಡಿದ ಮೂವರ ಹೆಸರಿನಲ್ಲಿ ಅರುಣ್ ಶಹಾಪೂರ್ ಹೆಸರು ಇಲ್ಲವಂತೆ.
ಇನ್ನು ಚುನಾವಣೆಗೆ ಉಸ್ತುವಾರಿಗಳನ್ನು ನೇಮಿಸಲಾಗಿದೆ. ಅದರಲ್ಲಿಯೂ ಅರುಣ್ ಶಹಾಪೂರ್ ಹೆಸರೇ ಇಲ್ಲ. ಎಬಿವಿಪಿ ಸಂಘಟನೆಯ ದಿನಗಳಿಂದ ಹಿಡಿದುಕೊಂಡು ಎರಡು ಬಾರಿ ಎಂಎಲ್ ಸಿ ಆಗಿದ್ದಾರೆ. ಇದಕ್ಕೂ ಮೇಲಾಗಿ ಸ್ಥಳೀಯರೆ ಆಗಿರುವ ಅವರ ಹೆಸರು ಉಸ್ತುವಾರಿ ಪಟ್ಟಿಯಲ್ಲೂ ಇಲ್ಲ. ಈ ಬಗ್ಗೆ ಮತಕ್ಷೇತ್ರದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಇದು ಕಣ್ತಪ್ಪಿನಿಂದ ಆಗಿದೆಯೋ ಅಥವ ಉದ್ದೇಶಪೂರ್ವಕವಾಗಿಯೇ ಕೈ ಬಿಡಲಾಗಿದೆಯೋ ಅನ್ನೋದರ ಗುಸುಗುಸು ಮಾತುಗಳು ಕೇಳಿ ಬರುತ್ತಿವೆ.