ಮಾಜಿ ಸಚಿವರ ವಿರುದ್ಧ ದೂರು ನೀಡಿದ ವಿದ್ಯಾರ್ಥಿನಿ ಅರೆಸ್ಟ್

351

ಲಖನೌ: ಬಿಜೆಪಿ ಮಾಜಿ ಕೇಂದ್ರ ಸಚಿವ ಸ್ವಾಮಿ ಚಿನ್ಮಯಾನಂದ ವಿರುದ್ಧ ಅತ್ಯಾಚಾರ ಆರೋಪದ ದೂರು ನೀಡಿದ್ದ ಎಲ್ಎಲ್ಎಂ ವಿದ್ಯಾರ್ಥಿನಿಯನ್ನ ಇಂದು ವಿಶೇಷ ತನಿಖಾ ತಂಡ ಅರೆಸ್ಟ್ ಮಾಡಿದೆ. ಬಂಧನದ ಬಗ್ಗೆ ಉತ್ತರ ಪ್ರದೇಶದ ಡಿಜಿಪಿ ಒ.ಪಿ ಸಿಂಗ್ ಖಚಿತಪಡಿಸಿದ್ದಾರೆ.

ಸ್ವಾಮಿ ಚಿನ್ಮಯಾನಂದರಿಂದ ಐದು ಕೋಟಿ ರೂಪಾಯಿ ಹಣ ಸುಲಿಗೆಗೆ ಯತ್ನಿಸಿದ ಆರೋಪ ಯುವತಿಯ ಮೇಲಿದೆ. ಈಕೆಯ ಇತರೆ ಮೂವರು ಸಹಚರರಾದ ಸಂಜಯ ಸಿಂಗ್, ಸಚಿನ ಸೆಂಗರ್, ವಿಕ್ರಮ ಸಿಂಗ್ ಅವರು ಹಣ ಸುಲಿಗೆ ಪ್ರಕರಣದಲ್ಲಿ ಈಗಾಗ್ಲೇ ಜೈಲಿನಲ್ಲಿದ್ದಾರೆ.

ಸೆಪ್ಟೆಂಬರ್ 20ರಂದು ಸ್ವಾಮಿ ಚಿನ್ಮಯಾನಂದರನ್ನ ಬಂಧಿಸಲಾಗಿದೆ. ಕೋರ್ಟ್ 14 ದಿನಗಳ ನ್ಯಾಯಂಗ ಬಂಧನಕ್ಕೆ ಒಪ್ಪಿಸಿದೆ. ಇದರ ನಡುವೆ ಎದೆನೋವಿನಿಂದ ಚಿನ್ಮಯಾನಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.




Leave a Reply

Your email address will not be published. Required fields are marked *

error: Content is protected !!