ಸ್ವಾಮಿ ಚಿನ್ಮಯಾನಂದ ಅರೆಸ್ಟ್

361

ನವದೆಹಲಿ: ಕಾನೂನು ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಆರೋಪ ಪ್ರಕರಣ ಸಂಬಂಧ ಬಿಜೆಪಿ ಲೀಡರ್ ಸ್ವಾಮಿ ಚಿನ್ಮಯಾನಂದನನ್ನ ಇಂದು ಬಂಧಿಸಲಾಗಿದೆ. ಚಿನ್ಮಯಾನಂದ ಬಂಧನದ ಬಗ್ಗೆ ಉತ್ತರ ಪ್ರದೇಶದ ಹಿರಿಯ ಪೊಲೀಸ್ರು ಸ್ಪಷ್ಟಪಡಿಸಿದ್ದಾರೆ.

ಬಿಜೆಪಿ ನಾಯಕನಾಗಿರುವ ಕಾರಣಕ್ಕೆ ಸ್ವಾಮಿ ಚಿನ್ಮಯಾನಂದ ವಿರುದ್ಧ ಸೂಕ್ತ ಕ್ರಮವಾಗ್ತಿಲ್ಲವೆಂದು ಆರೋಪಿಸಲಾಗಿತ್ತು. ಇದೀಗ ಅವರನ್ನ ಬಂಧಿಸಲಾಗಿದೆ. ಚಿನ್ಮಯಾನಂದ ಒಂದು ವರ್ಷಗಳವರೆಗೆ ನನ್ನ ಮೇಲೆ ದೈಹಿಕ ದೌರ್ಜನ್ಯವೆಸಗಿದ್ದಾರೆ. ಅವರ ಕೃತ್ಯದ ಬಗ್ಗೆ ನನ್ನ ಬಳಿ ಸಾಕ್ಷಾಧಾರಗಳಿವೆ. ಅದನ್ನ ಸೂಕ್ತ ಸಮಯದಲ್ಲಿ ಎಸ್ಐಟಿ ಅಧಿಕಾರಿಗಳಿಗೆ ನೀಡ್ತೀನಿ ಎಂದು ಯುವತಿ ಹೇಳಿದ್ದಾಳೆ.

ನನ್ನ ಮತ್ತು ನನ್ನ ಕುಟುಂಬದವರ ಹಿತದೃಷ್ಟಿಯಿಂದ ನಾನು ವಿಡಿಯೋ ರಿಲೀಸ್ ಮಾಡಿದೆ. ಇಲ್ದೇ ಹೋದ್ರೆ ಸ್ವಾಮಿ ಚಿನ್ಮಯಾನಂದ ನನ್ನನ್ನು ಕೊಲೆ ಮಾಡಿಸ್ತಿದ್ರು. ಈ ಬಗ್ಗೆ ಶಹಜನ್ಪುರ ಠಾಣೆ ಪೊಲೀಸ್ರು ಪ್ರಕರಣ ದಾಖಲಿಸಲು ಹಿಂದೇಟು ಹಾಕ್ತಿದ್ದಾರೆ ಎಂದು ಯುವತಿ ಹೇಳಿದ್ಳು.




Leave a Reply

Your email address will not be published. Required fields are marked *

error: Content is protected !!