ಬೆಂಗಳೂರಿನಲ್ಲಿ ಇತ್ತೀಚೆಗೆ ಮೆಗಾಸ್ಟಾರ್ ಚಿರಂಜೀವಿ ಮೇನ್ ರೋಲ್ ನಲ್ಲಿರುವ ಸೈರಾ ನರಸಿಂಹರೆಡ್ಡಿ ಚಿತ್ರದ ಕಾರ್ಯಕ್ರಮ ನಡೆಯಿತು. ಈ ಸಿನಿಮಾ ತೆಲುಗು, ತಮಿಳು ಸೇರಿದಂತೆ ಕನ್ನಡದಲ್ಲಿಯೂ ರಿಲೀಸ್ ಆಗ್ತಿದೆ. ಹೀಗಿರುವಾಗ ಕನ್ನಡ ನೆಲದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡಕ್ಕಿಂತ ಹೆಚ್ಚಾಗಿ ತೆಲುಗು ಭಾಷೆಯ ವಿಜೃಂಭಣೆ.
ನಟರಾದ ಚಿರಂಜೀವಿ, ನಟ, ಚಿತ್ರದ ನಿರ್ಮಾಪಕ ರಾಮ ಚರಣ, ನಟಿ ತಮನ್ನಾ ಭಾಟಿಯಾ ಸೇರಿದಂತೆ ಬಹುತೇಕರು ತೆಲುಗಿನಲ್ಲಿ ಮಾತ್ನಾಡಿದ್ರು. ಆದ್ರೆ, ಕನ್ನಡದ ನಟ, ನಟಿಯರು ಬೇರೆ ಕಡೆ ಹೋದ್ರೆ ಸ್ಥಳೀಯ ಭಾಷೆ ಮಾತ್ನಾಡ್ತಾರೆ. ಅದು ಬರದೆ ಹೋದಾಗ ಇಂಗ್ಲಿಷ್ ನಲ್ಲಿ ಮಾತ್ನಾಡ್ತಾರೆ. ಆದ್ರೆ, ಕರ್ನಾಟಕದಲ್ಲಿ ಮಾತ್ರ ಪರಭಾಷೆ ನಟ, ನಟಿಯರು ಅವರ ಭಾಷೆಯಲ್ಲಿ ಮಾತ್ನಾಡಿದ್ರೂ ಯಾರೂ ಕೇಳುವವರಿಲ್ಲ. ಹೀಗಾಗಿ ಗಾಂಧಿನಗರದ ಮಂದಿ ಏನ್ ಮಾಡ್ತಿದ್ದಾರೆ ಎಂದು ಕನ್ನಡದ ಅಭಿಮಾನಿಗಳು ಕೇಳ್ತಿದ್ದಾರೆ. ಇನ್ನು ಎಷ್ಟು ದಿನ ಈ ರೀತಿ ನಾವು ಸಹಿಸಿಕೊಂಡು ಇರಬೇಕು ಎಂದು ಪ್ರಶ್ನೆ ಮಾಡ್ತಿದ್ದಾರೆ.