ರಸ್ತೆ ಯಾವುದಯ್ಯ ಸಿಂದಗಿಯ ಆದರ್ಶ ಶಾಲೆಗೆ?

333

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಪಟ್ಟಣದ ಸರ್ಕಾರಿ ಆದರ್ಶ ಮಹಾವಿದ್ಯಾಲಯಕ್ಕೆ ಹೋಗುವ ರಸ್ತೆ ಸಂಪೂರ್ಣ ಕೆಸರುಮಯವಾಗಿದೆ. ಇಲ್ಲಿನ ಚಿತ್ರಣವನ್ನು ನೋಡಿದರೆ ಇಲ್ಲಿನ ರಸ್ತೆ ಸ್ಥಿತಿ ಯಾವ ರೀತಿಯಾಗಿದೆ ಅನ್ನೋದು ತಿಳಿಯುತ್ತೆ.

ಕಳೆದ ಎರಡು ದಿನಗಳಿಂದ ಮಳೆಯಾದ ಪರಿಣಾಮ ಈ ರೀತಿಯಾಗಿದೆ. ಆದರೆ, ಈ ಸ್ಥಿತಿ ಪ್ರತಿ ಮಳೆಗಾಲದಲ್ಲಿಯೂ ಇರುತ್ತೆ. ಈ ಬಗ್ಗೆ ಎಷ್ಟೇ ಮನವಿ ಮಾಡಿದರೂ, ಎಷ್ಟೇ ಸುದ್ದಿ ಮಾಡಿದರೂ ಜನಪ್ರತಿನಿಧಿಗಳು, ಅಧಿಕಾರಿಗಳು ನಿದ್ದೆಯಿಂದ ಏದ್ದಿಲ್ಲ. ಯಾವ ಕಾರಣಕ್ಕೆ ಇಷ್ಟೊಂದು ನಿರ್ಲಕ್ಷ್ಯ ಅನ್ನೋದು ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳ ಪ್ರಶ್ನೆ.

ಬರೀ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರಿಗೆ ಮಾತ್ರ ಸಮಸ್ಯೆಯಲ್ಲ. ಈ ರಸ್ತೆಯಿಂದ ಸಂಚರಿಸುವ ಸಾರ್ವಜನಿಕರಿಗೂ ಸಮಸ್ಯೆ ತಪ್ಪಿದ್ದಲ್ಲ. ಅಭಿವೃದ್ಧಿ ಅನ್ನೋದು ಬರೀ ಭಾಷಣಕ್ಕೆ ಸಿಮೀತವಾಗದೆ. ಇಲ್ಲಿನ ರಸ್ತೆ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕಿದೆ ಅನ್ನೋದು ಸ್ಥಳೀಯರ ಆಗ್ರಹ.




Leave a Reply

Your email address will not be published. Required fields are marked *

error: Content is protected !!