ಅ.18ಕ್ಕೆ ಕಾವೇರಿ ತೀರ್ಥೋದ್ಭವ

347

ಮಡಿಕೇರಿ: ನಾಡಿನ ಜೀವನದಿ ಎಂದೇ ಖ್ಯಾತಿಯನ್ನ ಹೊಂದಿರುವ ಕಾವೇರಿಯ ತೀರ್ಥೋದ್ಭವಕ್ಕೆ ತಲಕಾವೇರಿಯಲ್ಲಿ ಭರದ ಸಿದ್ಧತೆ ನಡೆದಿದೆ. ಅಕ್ಟೋಬರ್ 18ರಂದು ತೀರ್ಥೋದ್ಭವ ನಡೆಯಲಿದ್ದು, ಸಾವಿರಾರು ಭಕ್ತರು ಸೇರಲಿದ್ದಾರೆ.

ಅಕ್ಟೋಬರ್ 18ರ ಬೆಳಗಿನ ಜಾವ 12.59ಕ್ಕೆ ಸಲ್ಲುವ ಕರ್ಕಾಟಕ ಲಗ್ನದಲ್ಲಿ ಕಾವೇರಿ ತೀರ್ಥೋದ್ಭವ ನಡೆಯಲಿದೆ. ಇದಕ್ಕೂ ಮೊದ್ಲು ಸಂಜೆ ಮಹಾಮಂಗಳಾರತಿ ನಡೆಯಲಿದೆ. ಬಳಿಕ ಭಕ್ತರಿಗೆ ಪ್ರವೇಶ ನೀಡಲಾಗುತ್ತೆ. ರಾತ್ರಿ 10 ಗಂಟೆಯಿಂದ ತೀರ್ಥೋದ್ಭವ ತನಕ ಮಂತ್ರ ಪಠಣ ನಡೆಯಲಿದೆ.

ಈ ಬಾರಿ ಬೆಳಗಿನಜಾವ ತೀರ್ಥೋದ್ಭವ ನಡೆಯಲಿದೆ. ಹೀಗಾಗಿ ಭಾಗಮಂಡಲದ ತ್ರಿವೇಣಿ ಸಂಗಮದಿಂದ ತಲಕಾವೇರಿವರೆಗಿನ 8 ಕಿಲೋ ಮೀಟರ್ ವರೆಗೂ ಲೈಟ್ ವ್ಯವಸ್ಥೆ ಮಾಡಲಾಗಿದೆ. ಕೊಡಗು ಜಿಲ್ಲೆ ತಲಕಾವೇರಿಯಲ್ಲಿನ ಈ ವಿಶೇಷವನ್ನ ನೋಡಲು ನಾಡಿನ ಮೂಲೆ ಮೂಲೆಯಿಂದ ಸೇರಿದಂತೆ ತಮಿಳುನಾಡು, ಕೇರಳದಿಂದಲೂ ಭಕ್ತರು ಆಗಮಿಸ್ತಾರೆ.




Leave a Reply

Your email address will not be published. Required fields are marked *

error: Content is protected !!