ಬೆಂಗಳೂರು: ಟೆಲಿಫೋನ್ ಕದ್ದಾಲಿಕೆ ಪ್ರಕರಣ ದಿನದಿಂದ ದಿನಕ್ಕೆ ರಾಜ್ಯದಲ್ಲಿ ಭಾರಿ ಸಂಚಲನ ಮೂಡಿಸ್ತಿದೆ. ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರ ಮೇಲೆ ಇದೀಗ ಎಲ್ಲರೂ ಮುಗಿಬೀಳ್ತಿದ್ದಾರೆ. ಕಾಂಗ್ರೆಸ್ ನ ಕೆಲ ನಾಯಕರು ಸಹ ಗರಂ ಆಗಿದ್ದಾರೆ. ಇದರ ನಡುವೆ ಜೋಡೆತ್ತು ಎಂದು ತಮ್ಮನ್ನ ತಾವು ಕರೆದುಕೊಂಡಿದ್ದ ನಟ ದರ್ಶನ ಹಾಗೂ ಯಶ ಅವರ ಫೋನ್ ಟ್ಯಾಪ್ ಆಗಿತ್ತು ಅಂತಾ ಹೇಳಲಾಗ್ತಿದೆ.
ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಿಂದ ನಟಿ ಸುಮಲತಾ ಅಂಬರೀಶ ಸ್ಪರ್ಧಿಸಿದ್ರು. ಪ್ರತಿಸ್ಪರ್ಧಿಯಾಗಿ ನಿಖಿಲ ಕುಮಾರಸ್ವಾಮಿಯಿದ್ರು. ಹೀಗಾಗಿ ಈ ಕ್ಷೇತ್ರ ಭರ್ಜರಿ ಪೈಪೋಟಿ ನೀಡಿತ್ತು. ಆಗ ಸುಮಲತಾ ಪರ ನಿಂತಿದ್ದ ನಟರಾದ ದರ್ಶನ ಮತ್ತು ಯಶ ಫೋನ್ ಕರೆ ಸೇರಿ ಮೂರು ತಿಂಗಳಲ್ಲಿ 900 ನಂಬರ್ ಗಳ ಸಂಭಾಷಣೆ ಕದ್ದಾಲಿಸಲಾಗಿದೆ ಎಂದು ಹೇಳಲಾಗ್ತಿದೆ.
ಸಿಬಿಐ ಮಟ್ಟದಲ್ಲಿ ತನಿಖೆ ನಡೆಸಿಬೇಕೆಂದು ಬಿಜೆಪಿ ಅವರು ಹೇಳ್ತಿದ್ದಾರೆ. ಯಾವುದೇ ರೀತಿಯ ತನಿಖೆ ನಡೆದು, ತಪ್ಪಿತಸ್ಥರಿಗೆ ಶಿಕ್ಷೆಯಾಗ್ಲಿ ಅಂತಾ ಕಾಂಗ್ರೆಸ್ ನಾಯಕರು ಹೇಳ್ತಿದ್ದಾರೆ. ಹೀಗಾಗಿ ಆರೋಪ ಪ್ರತ್ಯಾರೋಪಗಳ ನಡುವೆ ಮಾಜಿ ಸಿಎಂ ಹಚ್ಡಿಕೆಗೆ ಬಹುದೊಡ್ಡ ಕಂಟಕವಾಗುವ ಸಾಧ್ಯತೆಯಿದೆ.