ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಕರ್ನಾಟಕ ಸೇರಿದಂತೆ 8 ರಾಜ್ಯಗಳಿಗೆ ನೂತನ ರಾಜ್ಯಪಾಲರನ್ನ ನೇಮಕ ಮಾಡಲಾಗಿದೆ. ಕೇಂದ್ರ ಸರ್ಕಾರ, ಗೋವಾ, ತ್ರಿಪುರ, ಜಾರ್ಖಂಡ್, ವಿಜೋರಾಮ್, ಮಧ್ಯಪ್ರದೇಶ, ಹಿಮಾಚಲ ಪ್ರದೇಶ, ಹರಿಯಾಣ ಸೇರಿ 8 ರಾಜ್ಯಗಳಿಗೆ ಹೊಸ ರಾಜ್ಯಪಾಲರನ್ನ ನೇಮಕ ಮಾಡಲಾಗಿದೆ.
ಕರ್ನಾಟಕಕ್ಕೆ ಕೇಂದ್ರ ಸಚಿವರಾಗಿದ್ದ ಥಾವರ್ ಚಂದ್ ಗೆಹ್ಲೋಟ್ ಅವರನ್ನ ನೇಮಕ ಮಾಡಲಾಗಿದೆ. ವಜುಭಾಯ್ ವಾಲಾ ಜಾಗಕ್ಕೆ ಗೆಹ್ಲೋಟ್ ನೇಮಕವಾಗಿದ್ದಾರೆ. ಈ ಮೂಲಕ ಕರ್ನಾಟಕ ಗೆಹ್ಲೋಟ್ ಕರ್ನಾಟಕದ 19ನೇ ರಾಜ್ಯಪಾಲರಾಗಿದ್ದಾರೆ.
ಗೋವಾಗೆ ಪಿ.ಎಸ್ ಸುಂದರನ್ ಪಿಳ್ಳೈ, ತ್ರಿಪುರಾಗೆ ನಾರಾಯಣ ಆರ್ಯ, ಜಾರ್ಖಂಡ್ ಗೆ ರಮೇಶ ಬಾಯಿಸ್, ಹರಿಯಾಣಗೆ ಬಂಡಾರು ದತ್ತಾತ್ರಯ, ಮಿಜೋರಾಂಗೆ ಹರಿ ಬಾಬು ಕಂಭಾಮ್ ಪತಿ, ಮಧ್ಯಪ್ರದೇಶಗೆ ಮಂಗುಭಾಯಿ ಛಂಗಭಾಯಿ ಪಾಟೀಲ ಹಾಗೂ ಹಿಮಾಚಲಪ್ರದೇಶಕ್ಕೆ ರಾಜೇಂದ್ರ ವಿಶ್ವನಾಥ ಅರ್ಲೇಕರ್ ಅವರನ್ನ ರಾಜ್ಯಪಾಲರನ್ನ ನೇಮಕ ಮಾಡಲಾಗಿದೆ.