ಪ್ರಜಾಸ್ತ್ರ ಸುದ್ದಿ
ವಿಜಯಪುರ: ಅರಬ್ಬಿ ಸಮುದ್ರದಲ್ಲಿನ ವಾಯುಭಾರ ಕುಸಿತದಿಂದ ಉಂಟಾದ ತೌಕ್ತೆ ಚಂಡಮಾರುತ ಎಫೆಕ್ಟ್ ಕರ್ನಾಟಕದ ಮೇಲೂ ಭರ್ಜರಿ ಆಗ್ತಿದೆ. ಗುಮ್ಮಟನಗರಿ ವಿಜಯಪುರ ಭಾಗದಲ್ಲಿಯೂ ಭಾರೀ ಗಾಳಿ, ಮಳೆಯಾಗ್ತಿದೆ.
ವಿಜಯಪುರ ನಗರ, ಸಿಂದಗಿ, ದೇವರಹಿಪ್ಪರಗಿ, ಬಸವನಬಾಗೇವಾಡಿ, ಇಂಡಿ, ಮುದ್ದೇಬಿಹಾಳ ತಾಲೂಕುಗಳಲ್ಲಿ ಶನಿವಾರ ಭಾರೀ ಪ್ರಮಾಣದಲ್ಲಿ ಗಾಳಿ ಬೀಸಿದ್ದು, ಸಂಜೆ ವೇಳೆಗೆ ಮಳೆ ಸುರಿಯತೊಡಗಿದೆ. ಸಿಂದಗಿ ಭಾಗದಲ್ಲಿ ಸಂಜೆ ಒಂದಿಷ್ಟು ಮಳೆಯಾಗ್ತಿದ್ದು, ಇಡೀ ದಿನ ಪಟ್ಟಣದಲ್ಲಿ ವಿದ್ಯುತ್ ಇಲ್ಲದೆ ಜನರು ಪರದಾಡುವಂತಾಗಿದೆ.