ಸಿಡಿಲಿಗೆ ಎರಡು ಜಾನುವಾರಗಳು ಬಲಿ

255

ಪ್ರಜಾಸ್ತ್ರ ಸುದ್ದಿ

ಅಳ್ನಾವರ: ಸಿಡಿಲು ಬಡಿದು ಎರಡು ಎಮ್ಮೆಗಳು ಸಾವನ್ನಪ್ಪಿರುವ ಘಟನೆ ಅಳ್ನಾವರ ತಾಲೂಕಿನ ಶಿವನಗರ ಗ್ರಾಮದಲ್ಲಿ ನಡೆದಿದೆ. ಗಂಗಾರಾಮ ವಿಠಲ್ ಕೋಳಾಪಟ್ಟಿ ಎಂಬುವರಿಗೆ ಸೇರಿದ್ದ ಎರಡು ಎಮ್ಮೆಗಳು ಸಾವನ್ನಪ್ಪಿವೆ. ಇವುಗಳ ಮೌಲ್ಯ ಅಂದಾಜು ಒಂದೂವರೆ ಲಕ್ಷ ರೂಪಾಯಿ ಎನ್ನಲಾಗುತ್ತಿದೆ.

ಸಂಬಂಧಪಟ್ಟ ಅಧಿಕಾರಿಗಳು ಈ ಘಟನೆಯನ್ನ ಪರಿಶೀಲಿಸಿ ರೈತನಿಗೆ ಸೂಕ್ತ ಪರಿಹಾರ ಒದಗಿಸುವಂತೆ ಹೊನ್ನಾಪುರ ಗ್ರಾಮ ಪಂಚಾಯಿತಿ ಸದಸ್ಯ ಸಂತೋಷ ಕಲಾಜ ಆಗ್ರಹಿಸಿದ್ದಾರೆ.

ಕಳೆದ ಆರು ತಿಂಗಳ ಹಿಂದೆ ಸುರಿದ ಮಳೆಗೆ ಕಂಬಾರಗಣವಿ ಹಳ್ಳದಲ್ಲಿಯು ಸಹ ಎರಡು ಜಾನುವಾರಗಳು ಕೊಚ್ಚಿ ಕೊಂಡು ಹೋಗಿದ್ದವು. ಅದಕ್ಕೆ ಯಾವುದೇ ಪರಿಹಾರ ಇದುವರೆಗೂ ದೊರೆತಿಲ್ಲ. ಇದು ಅದರಂತೆ ಆಗಬಾರದು ಅಂತಿದ್ದಾರೆ ಸ್ಥಳೀಯರು.




Leave a Reply

Your email address will not be published. Required fields are marked *

error: Content is protected !!