ತನ್ನ ನಿರ್ಲಕ್ಷ್ಯಕ್ಕೆ ತಾನೇ ಜೀವ ಕಳೆದುಕೊಂಡ ಟಿಪ್ಪರ್ ಚಾಲಕ

297

ಪ್ರಜಾಸ್ತ್ರ ಸುದ್ದಿ

ದೇವರಹಿಪ್ಪರಗಿ: ಎಂ ಸ್ಯಾಂಡ್ ತುಂಬಿದ ಟಿಪ್ಪರ್ ಹರಿದ ಪರಿಣಾಮ ಚಾಲಕ ಮೃತಪಟ್ಟಿರುವ ಘಟನೆ ತಾಲೂಕಿನ ಪಡಗಾನೂರ ಗ್ರಾಮದ ಸಮೀಪದ ಜ್ಯೋತಿ ಸ್ಟೋನ್ ಕ್ರಸರ್ ಕಚೇರಿ ಎದುರು ನಡೆದಿದೆ. ಕೈಲಾಸ ಕೇದಾರ ಮಾತೋ(36) ಎಂಬಾತ ಸಾವನ್ನಪ್ಪಿದ್ದಾನೆ.

ಮೃತ ಕೈಲಾಸ

ಎಂ ಸ್ಯಾಂಡ್ ತುಂಬಿಕೊಂಡು ಹೊನವಾಡಕ್ಕೆ ಹೋಗುವ ಸಲುವಾಗಿ ಚೀಟಿ ಪಡೆಯುವುದಕ್ಕಾಗಿ ಜ್ಯೋತಿ ಸ್ಟೋನ್ ಕ್ರಸರ್ ಕಚೇರಿ ಬಳಿಯ ಇಳಿಜಾರಿನಲ್ಲಿ ಟಿಪ್ಪರ್ ನಿಲ್ಲಿಸಿದ್ದ. ಈ ವೇಳೆ ಅದಕ್ಕೆ ಹ್ಯಾಂಡ್ ಬ್ರೇಕ್ ಹಾಕುವುದನ್ನ ಮರೆತಿದ್ದ. ಇದೇ ಸಂದರ್ಭದಲ್ಲಿ ಟಿಪ್ಪರ್ ನ ಗ್ಲಾಸ್ ಒರೆಸಲು ಬಂಪರ್ ಮೇಲೆ ನಿಂತುಕೊಂಡಿದ್ದಾನೆ. ಈ ವೇಳೆ ಟಿಪ್ಪರ್ ತನ್ನಿಂದ ತಾನೆ ಮುಂದಕ್ಕೆ ಚಲಿಸಿದೆ.

ಟಿಪ್ಪರ್ ಚಲಿಸಿದ್ರಿಂದ ಗಾಬರಿಗೊಂಡ ಚಾಲಕ ಕೈಲಾಸ ಕೆಳಗೆ ಬಿದ್ದಿದ್ದಾನೆ. ಈ ವೇಳೆ ಟಿಪ್ಪರ್ ಮೈಮೇಲೆ ಹರಿದು ಹೋದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಈತ ಜಾರ್ಖಂಡ್ ಮೂಲದವನಾಗಿದ್ದಾನೆ. ಈ ಸಂಬಂಧ ದೇವರಹಿಪ್ಪರಗಿ ಪೊಲೀಸ್ ಠಾಣೆಯಲ್ಲಿ ಜ್ಯೋತಿ ಸ್ಟೋನ್ ಕ್ರಸರ್ ನ ಸೂಪರ್ ವೈಸರ್ ವಿಜಯಕುಮಾರ ರಾಠೋಡ ಎಂಬುವರು ಪ್ರಕರಣ ದಾಖಲಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!