ಕೊಲ್ಕತ್ತಾ: ತೃಣಮೂಲ ಕಾಂಗ್ರೆಸ್ ಸಂಸದೆ ಹಾಗೂ ನಟಿ ನುಸ್ರುತ ಜಹಾನ್ ವಿರುದ್ಧ ಕೆಲವರು ಟೀಕೆಗಳನ್ನ ಮಾಡ್ತಿದ್ದಾರೆ. ನುಸ್ರುತ ದಸರಾ ಹಬ್ಬದ ಹಿನ್ನೆಲೆಯಲ್ಲಿ ದುರ್ಗಾದೇವಿ ಪೂಜೆ ಮಾಡಿರುವುದಕ್ಕೆ ಇಸ್ಲಾಂ ಧರ್ಮದ ಕೆಲವರು ಟೀಕೆಗಳ ಸುರಿಮಳೆ ಸುರಿಸಿದ್ದಾರೆ.
ಇಸ್ಲಾಂ ಧರ್ಮವನ್ನ ಈ ರೀತಿ ಅವಮಾನಿಸುವ ಬದ್ಲು ಹೆಸರು ಬದಲಿಸಿಕೊಳ್ಳಿ ಎಂದು ಮೌಲ್ವಿಯೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ನುಸ್ರುತ, ಎಲ್ಲ ಧರ್ಮಗಳ ಸೌಹಾರ್ದತೆ ಸಾರಲು ನನ್ನದೆಯಾದ ದಾರಿಯಲ್ಲಿ ಹೋಗ್ತಿದ್ದೇನೆ. ಇದು ನನ್ಗೆ ಸರಿಯೆನಿಸ್ತಿದೆ ಅಂತಾ ಹೇಳಿದ್ದಾರೆ. ಇತ್ತೀಚೆಗಷ್ಟೇ ನಿಖಿಲ ಜೈನ್ ಅನ್ನೋರನ್ನ ನುಸ್ರುತ ಜಹಾನ್ ವಿವಾಹ ಮಾಡಿಕೊಂಡಿದ್ದಾರೆ.