ಬೆಂಗಳೂರು: ಹಿಂದಿ ಬ್ಯಾನರ್ ಹರಿದು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಜನ ಕನ್ನಡಪರ ಹೋರಾಟಗಾರರನ್ನ ಬಂಧಿಸಲಾಗಿದೆ. ಈ ಬಗ್ಗೆ ಎಲ್ಲೆಡೆ ವ್ಯಾಪಾಕ ಚರ್ಚೆಗೆ ಗ್ರಾಸವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆದಿದೆ.
ಬೆಂಗಳೂರಿನ ಇನ್ ಫೆಂಟ್ರಿ ರಸ್ತೆಯ ಬಳಿಯ ಗಣೇಶ ಬಾಗಾ ಪ್ರಾರ್ಥನಾ ಮಂದಿರದ ಹತ್ತಿರದ ಮಾರವಾಡಿಗಳು ನಡೆಸಿದ ಘಟನೆ ಬಗ್ಗೆ ಕನ್ನಡಿಗರು ಕೆರಳಿದ್ದಾರೆ. ಕಮರ್ಷಿಲ್ ಸ್ಟ್ರೀಟ್ ಪೊಲೀಸ್ರು ಕನ್ನಡಪರ ಹೋರಾಟಗಾರರನ್ನ ಬಂಧಿಸಿರೋದನ್ನ ವಿರೋಧಿಸಿ ಟೌನ್ ಹಾಲ್ ಮುಂದೆ ಇಂದು ಸಂಜೆ 5.30ಕ್ಕೆ ಪ್ರತಿಭಟನೆ ನಡೆಸಲಾಗ್ತಿದೆ.
ಘಟನೆ ಹಿನ್ನೆಲೆ: ಗಣೇಶ ಬಾಬ್ ಪ್ರಾರ್ಥನಾ ಮಂದಿರದ ಬಳಿ ಚರ್ತುಮಾಸದ ಪ್ರಯುಕ್ತ ಹಿಂದಿಯಲ್ಲಿ ಬ್ಯಾನರ್ ಕಟ್ಟಲಾಗಿತ್ತು. ಇದನ್ನ ಕನ್ನಡಪರ ಹೋರಾಟಗಾರರು ಹರಿದು ಆಕ್ರೋಶ ವ್ಯಕ್ತಪಡಿಸಿದ್ರು. ಈ ಬಗ್ಗೆ ಜೈನ್ ಸಮುದಾಯದವರು ಕರ್ನಾಟಕ ಬಂದ್ ನಡೆಸಬೇಕೆಂದು ಒತ್ತಾಯಿಸಿದ್ರು. ಇದು ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿತು. ಕೋಮು ಸೌಹರ್ದಾತೆಗೆ ಧಕ್ಕೆ ತಂದ ಪ್ರಕರಣದಡಿ ಆರು ಜನರನ್ನ ಬಂಧಿಸಿದ್ದಾರೆ. ಅಲ್ದೇ ಸಂಸದ ತೇಜಸ್ವಿಸೂರ್ಯ ಮತ್ತು ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಮಾಡಿರುವ ಟ್ವೀಟ್ ಕನ್ನಡಿಗರನ್ನ ಮತ್ತಷ್ಟು ಕೆರಳಿಸಿದೆ. ಹೀಗಾಗಿ ಇಂದು ಸಂಜೆ 5.30ಕ್ಕೆ ಟೌನ್ ಹಾಲ್ ಮುಂದೆ ಪ್ರತಿಭಟನೆ ನಡೆಸಲಾಗ್ತಿದೆ.