ಇನ್ನು ಘಟಾನುಘಟಿ ನಾಯಕರ ಭವಿಷ್ಯದತ್ತ ಚಿತ್ತ..

328

17 ನೇ ಲೋಕಸಭಾ ಚುನಾವಣೆಯ ಮತದಾನಕ್ಕೆ ಇಂದು ತೆರೆ ಬೀಳುತ್ತೆ. ಏಳು ಹಂತಗಳಲ್ಲಿ ನಡೆಯುತ್ತಿರುವ ಮತದಾನ ಪ್ರಕ್ರಿಯೆ ಇಂದು ಸಂಜೆ ಮುಗಿಲಿದೆ. ಕೊನೆಯ ಹಂತದ ವೋಟಿಂಗ್ ನಲ್ಲಿ ಏಳು ರಾಜ್ಯಗಳು, ಒಂದು ಕೇಂದ್ರಾಡಳಿತ ಪ್ರದೇಶ ಸೇರಿದ್ದಂತೆ ಒಟ್ಟು 59 ಕ್ಷೇತ್ರಗಳಲ್ಲಿ ಮತದಾನ ಶುರುವಾಗಿದೆ.

ಈ ಏಳು ರಾಜ್ಯಗಳಲ್ಲಿ ಪ್ರಧಾನಿ ಮೋದಿ ಸ್ಪರ್ಧೆ ಮಾಡಿರುವ ವಾರಣಾಸಿ ಕ್ಷೇತ್ರ ಸಹ ಇದೆ. ಇದರ ಜೊತೆಗೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಪ್ರಾಬಲ್ಯದ ಗೋರಕ್ ಪುರ್ ಕ್ಷೇತ್ರದಲ್ಲಿ ಇಂದು ವೋಟಿಂಗ್ ನಡೆಯುತ್ತಿದೆ. ಇಷ್ಟು ದಿನಗಳ ಪ್ರಚಾರ, ರ್ಯಾಲಿ, ಬಹಿರಂಗ ಸಮಾವೇಶ, ದೇಗುಲ ಸಂಚಾರ ಮಾಡುತ್ತಾ, ವಿರೋಧ ಪಕ್ಷಗಳ ವಿರುದ್ಧ ಟೀಕಾಸ್ತ್ರ ಪ್ರಯೋಗ ಮಾಡಲಾಯ್ತು. ಇದೀಗ ಅದೆಲ್ಲ ಮುಗಿದಿದ್ದು, ಇನ್ನು ಏನಿದ್ರೂ 23ರಂದು ಹೊರ ಬೀಳುವ ದೇಶದ ನಾಯಕರ ಭವಿಷ್ಯದ ಮೇಲೆ ಎಲ್ಲರ ಚಿತ್ತ.

ಇನ್ನು ಇದರ ಜೊತೆಗೆ ರಾಜ್ಯದಲ್ಲಿ ಕುಂದಗೋಳ ಹಾಗೂ ಚಿಂಚೋಳಿಯಲ್ಲಿ ಉಪಚುನಾವಣೆಯ ಮತದಾನ ನಡೆಯುತ್ತಿದೆ. ಇದರ ಫಲಿತಾಂಶ ಸಹ ಮೇ 23ರಂದು ಬರಲಿದ್ದು, ರಾಜ್ಯ ರಾಜಕಾರಣದ ಮೇಲೆ ಇದು ಹೇಗೆ ಪರಿಣಾಮ ಬೀರುತ್ತೆ ಅನ್ನೋ ಕುತೂಹಲ ಎಲ್ಲರಲ್ಲಿ ಇದೆ.


TAG


Leave a Reply

Your email address will not be published. Required fields are marked *

error: Content is protected !!