ಕೃಷಿ ಕಾನೂನಿಂದ 10 ಕೋಟಿ ಸಣ್ಣ ರೈತರಿಗೆ ಉಪಯೋಗ: ರಾಷ್ಟ್ರಪತಿ

351

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಕೇಂದ್ರ ಸರ್ಕಾರದ ಮೂರು ಕೃಷಿ ಕಾನೂನಗಳ ಬಗ್ಗೆ ಮಾತ್ನಾಡಿರುವ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು, ಈ ಕಾನೂನು ಜಾರಿಗೆಯಾದ್ರೆ 10 ಕೋಟಿ ಸಣ್ಣ ರೈತರಿಗೆ ಪ್ರಯೋಜನವಾಗಲಿದೆ ಎಂದಿದ್ದಾರೆ. ಸಂಸತ್ತಿನ ಜಂಟಿ ಅಧಿವೇಶನ ಉದ್ದೇಶಿಸಿ ಮಾತ್ನಾಡಿದ ವೇಳೆ ಈ ವಿಷಯ ಪ್ರಸ್ತಾಪಿಸಿದ್ರು.

ಇದೇ ದೆಹಲಿಯ ಘಟನೆಯಲ್ಲಿ ರಾಷ್ಟ್ರಧ್ವಜಕ್ಕೆ ಹಾಗೂ ಗಣರಾಜ್ಯೋತ್ಸವಕ್ಕೆ ಮಾಡಿದ ಅವಮಾನ. ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು ನಮಗೆ ನೀಡಲಾಗಿದೆ. ಅದರ ಜೊತೆಗೆ ಕಾನೂನು ಹಾಗೂ ನಿಯಮಗಳನ್ನ ಸಹ ಪಾಲಿಸಬೇಕಾಗಿದೆ ಎಂದರು. ಇನ್ನು ರೈತರ ಪ್ರತಿಭಟನೆ ಬೆಂಬಲಿಸಿರುವ 20ಕ್ಕೂ ಹೆಚ್ಚು ವಿರೋಧ ಪಕ್ಷಗಳು ರಾಷ್ಟ್ರಪತಿ ಭಾಷಣ ಬಹಿಷ್ಕರಿಸಿದ್ರು.




Leave a Reply

Your email address will not be published. Required fields are marked *

error: Content is protected !!