ನವದೆಹಲಿ: ಕೇಂದ್ರದ ಕಾರ್ಮಿಕ ಕಾನೂನುಗಳ ವಿರುದ್ಧ ಕೇಂದ್ರ ಕಾರ್ಮಿಕ ಸಂಘಟನೆಗಳು ಬುಧವಾರ ಬಂದ್ ಗೆ ಕರೆ ನೀಡಿವೆ. ರಾಷ್ಟ್ರವ್ಯಾಪಿ ಬಂದ್ ಗೆ ಕರೆ ನೀಡಿದ್ದು, ನಾಡಿನ ಕಾರ್ಮಿಕ ಸಂಘಟನೆಗಳು, ಸಂಘ, ಸಂಸ್ಥೆಗಳು ನೈತಿಕೆ ಬೆಂಬಲ ವ್ಯಕ್ತಪಡಿಸಿವೆ. ಹೀಗಾಗಿ ಬಂದ್ ಎಫೆಕ್ಟ್ ರಾಜ್ಯದ ಮೇಲೆ ಎಷ್ಟಾಗುತ್ತೆ ಅನ್ನೋ ಟೆನ್ಷನ್ ಇದೆ.
ರಾಜಧಾನಿಯಲ್ಲಿ ಬಿಎಂಟಿಸಿ, ಕೆಎಸ್ಆರ್ ಟಿಸಿ ಸೇರಿದಂತೆ ಖಾಸಗಿ ಸಾರಿಗೆ ಸಂಸ್ಥೆಗಳು ಬೆಂಬಲ ಸೂಚಿವೆ. ಆದ್ರೆ, ಬಸ್ ಸೇವೆಯಲ್ಲಿ ತೊಂದರೆಯಾಗದಂತೆ ಮುಷ್ಕರಕ್ಕೆ ಸಪೋರ್ಟ್ ನೀಡಿವೆ. ಇದರ ಜೊತೆಗೆ ಮೆಟ್ರೋ, ಕ್ಯಾಬ್ ಗಳು, ಟೂರಿಂಗ್ ಗಾಡಿಗಳು, ಲಾರಿ ಮಾಲೀಕರ ಸಂಘಟನೆಗಳು ಬೆಂಬಲ ಸೂಚಿಸಿದ್ರೂ ಸೇವೆ ನೀಡ್ತಿವೆ. ಕೆಲ ಆಟೋ ಸಂಘಟನೆಗಳು ಬೆಂಬಲ ನೀಡಿದ್ದು ಸೇವೆ ನಿಲ್ಲಿಸಲು ಮುಂದಾಗಿವೆ.
ಬಂದ್ ಬಿಸಿ ಬೆಂಗಳೂರು ಸೇರಿದಂತೆ ಮಹಾನಗರಗಳಲ್ಲಿ ಸಲ್ಪ ಮಟ್ಟಿಗೆ ತಟ್ಟಬಹುದು. ಉಳಿದ ಜಿಲ್ಲೆಗಳ ಮೇಲೆ ಇದರ ಪರಿಣಾಮ ಅಷ್ಟೊಂದು ಇರೋದಿಲ್ಲವೆಂದು ಹೇಳಲಾಗ್ತಿದೆ. ಹೀಗಾಗಿ ಎಂದಿನಂತೆ ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಸಾಧ್ಯತೆಯಿದೆ. ಶಾಲಾ, ಕಾಲೇಜುಗಳ ರಜೆಯ ಕುರಿತು ಇನ್ನು ಯಾವುದೇ ರೀತಿಯ ಮಾಹಿತಿ ಬಂದಿಲ್ಲ. ಮುಷ್ಕರದ ಎಫೆಕ್ಟ್ ಶಿಕ್ಷಣ ಸಂಸ್ಥೆಗಳ ಮೇಲಾಗುವುದು ತುಂಬಾ ಕಡಿಮೆ ಎನ್ನಲಾಗ್ತಿದೆ.