ಬೆಂಗಳೂರು: ಕರೋನಾ ವಿರುದ್ಧದ ಹೋರಾಟಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ನಾಳೆ ರಾತ್ರಿ 9 ಗಂಟೆಗೆ ಲೈಟ್ ಆಫ್ ಮಾಡಿ ದೀಪ ಬೆಳಗಲು ಕರೆ ನೀಡಿದ್ದಾರೆ. ದೇಶದ ಜನತೆ ಕರೋನಾ ವಿರುದ್ಧ ಒಗ್ಗಟ್ಟಾಗಿದೆ ಅನ್ನೋದರ ಸಲುವಾಗಿ ದೀಪ ಬೆಳಗಿ ಕರೋನಾ ಓಡಿಸಿ ಎಂದಿದ್ದಾರೆ.
ಪ್ರಧಾನಿ ಮೋದಿ ಕರೆಯಂತೆ ನಾಳೆ ದೇಶ್ಯಾದ್ಯಂತ ರಾತ್ರಿ 9 ಗಂಟೆಗೆ 9 ನಿಮಿಷಗಳ ಕಾಲ ಲೈಟ್ ಆಫ್ ಮಾಡಿ ಒಗ್ಗಟ್ಟು ಪ್ರದರ್ಶನಕ್ಕೆ ರೆಡಿಯಾಗಿದ್ದಾರೆ. ಆದ್ರೆ, ಈ ವೇಳೆ ಒಂದಿಷ್ಟು ವಿಚಾರಗಳನ್ನ ಯಾರೂ ಮರೆಯಬಾರದು. ಏಕಕಾದಲ್ಲಿ ದೇಶ್ಯಾದ್ಯಂತ ಲೈಟ್ ಆಫ್ ಮಾಡುವುದ್ರಿಂದ ಹಾಗೂ ವಿದ್ಯುತ್ ಉಪಕರಣಗಳನ್ನ ಸ್ಚಿಚ್ ಆಫ್ ಮಾಡಿದ್ರೆ, ವೋಲ್ಟೇಜ್ ಏರಿಳಿತ ಸಂಭವಿಸುತ್ತೆ ಅನ್ನೋ ಆತಂಕ ಎದುರಾಗಿತ್ತು.
ಈ ವಿಚಾರವಾಗಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ(KPTCL)ದಿಂದ ಪ್ರಕಟಣೆ ಹೊರಡಿಸಲಾಗಿದೆ. ಮಾರ್ಚ್ 5ರ ರಾತ್ರಿ 9 ಗಂಟೆಗೆ ಎಲ್ಲಾ ಲೈಟ್ಗಳ ಆಫ್ ಮಾಡುವಂತೆ ಸೂಚಿಸಿದ್ದಾರೆ. ಇದನ್ನು ಹೊರತುಪಡಿಸಿ ಇನ್ನಿತರ ಎಲೆಕ್ಟ್ರಿಕಲ್ ಉಪಕರಣಗಳಾದ ರೆಫ್ರಿಜರೇಟರ್, ಎಸಿ, ಟಿವಿ ಹಾಗೂ ಫ್ಯಾನ್ಗಳನ್ನ ಆನ್ನಲ್ಲಿರುವಂತೆ ನೋಡಿಕೊಳ್ಳಿ. ಆಗ ಯಾವುದೇ ವೋಲ್ಟೇಜ್ ಏರಿಳಿತವಾಗಿ ಗ್ರಿಡ್ನಲ್ಲಿ ಅಸ್ಥಿರತೆ ಆಗೋದಿಲ್ಲ.
ಹೀಗಾಗಿ 9 ಗಂಟೆಯ ವೇಳೆಗೆ ಬಲ್ಬ್ಗಳನ್ನ ಹೊರತುಪಡಿಸಿ ಇನ್ನಿತರ ಎಲೆಕ್ಟ್ರಿಕಲ್ ಉಪಕರಣಗಳನ್ನು ಆನ್ನಲ್ಲಿಡಿ ಅಂತ KPTCL ರಾಜ್ಯದ ಜನರಲ್ಲಿ ಮನವಿ ಮಾಡಿದೆ. ಇಂದು ನ್ಯಾಷನಲ್ ಲೋಡ್ ಡಿಸ್ಪ್ಯಾಚ್ ಸೆಂಟರ್, ಸ್ಥಳೀಯ ಲೋಡ್ ಡಿಸ್ಪ್ಯಾಚ್ ಸೆಂಟರ್ ಹಾಗೂ ಎಲ್ಲಾ ರಾಜ್ಯಗಳ ಲೋಡ್ ಡಿಸ್ಪ್ಯಾಚ್ ಸೆಂಟರ್ನ ಅಧಿಕಾರಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ ಗ್ರಿಡ್ ಸೆಕ್ಯೂರಿಟಿ ಬಗ್ಗೆ ಚರ್ಚೆ ನಡೆಸಲಾಗಿದೆ.
ಈ ವೇಳೆ ವೋಲ್ಟೇಜ್ ಏರಿಳಿತಕ್ಕೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆ ಆಗದಂತೆ ಅಗತ್ಯ ಕ್ರಮ ಕೈಗೊಳ್ಳಲು ನ್ಯಾಷನಲ್ ಲೋಡ್ ಡಿಸ್ಪ್ಯಾಚ್ ಸೆಂಟರ್ ಅಧಿಕಾರಿಗಳು, ಎಲ್ಲಾ ರಾಜ್ಯದ ವಿದ್ಯುತ್ ನಿಗಮದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅದರನ್ವಯ ಆಸ್ಪತ್ರೆಗಳು ಹಾಗೂ ಇನ್ನಿತರ ಅಗತ್ಯ ಕೇಂದ್ರಗಳಲ್ಲಿ ಲೈಟ್ಗಳು ಆನ್ ಇರಲಿವೆ. ಬೀದಿ ದೀಪಗಳು ಕೂಡ ಆನ್ ಇರಲಿವೆ ಎಂದು ತಿಳಿಸಿದ್ದಾರೆ.