ಅಥಣಿ: ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಬರುವ ಹಲವಾರು ಬಡ ಜನರಿಗೆ ಡಿಸಿಎಂ ಲಕ್ಷ್ಮಣ ಸವದಿ ಹಾಲು ವಿತರಣೆ ಮಾಡಿದ್ದಾರೆ. ಸರ್ಕಾರದಿಂದ ಏಪ್ರಿಲ್ 14ರ ವರೆಗೂ ಉಚಿತ ಹಾಲು ವಿತರಣೆ ಮಾಡ್ತಿದ್ದು, ಅದರಂತೆ ಡಿಸಿಎಂ ಸವದಿ ಅವರು ಗುರುತಿಸಲಾದ ವಾರ್ಡ್ ಗಳಲ್ಲಿ ಹಾಲು ವಿತರಣೆ ಮಾಡಿದ್ದಾರೆ.
ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹಾಗೂ ಬೆಳಗಾವಿ ಜಿಲ್ಲಾ ಹಾಲು ಉತ್ಪಾದಕರ ಸಂಘದ ನಿರ್ದೇಶಕರಾದ ಅಪ್ಪಾಸಾಬ ಅವತಾಡೆ ಅವರು ಉಚಿತವಾಗಿ ಕೆಎಂಎಫ್ ವತಿಯಿಂದ ಹಾಲು ವಿತರಿಸಿದ್ದಾರೆ. ಮಹಾಮಾರಿ ಕರೋನಾ ವೈರಸ್ ದಿಂದ ಎಲ್ಲರೂ ಜಾಗೃತರಾಗಿ ತಮ್ಮತಮ್ಮ ಮನೆಯಲ್ಲಿಯೇ ಸುರಕ್ಷಿತವಾಗಿರಿ ಎಂದು ಸಾರ್ವಜನಿಕರಿಗೆ ಸಲಹೆ ನೀಡಿದರು. ಈ ವೇಳೆ ಪುರಸಭೆ ಸಿಬ್ಬಂದಿ ವರ್ಗ ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.