ರೈಲು ಡಿಕ್ಕಿಯಾಗಿ 32 ಕುರಿ ಸೇರಿ ಓರ್ವ ಸಾವು

468

ಪ್ರಜಾಸ್ತ್ರ ಸುದ್ದಿ

ಶ್ರೀರಂಗಪಟ್ಟಣ: ಮೈಸೂರಿಂದ ಶ್ರೀರಂಗಪಟ್ಟಣ ಮಾರ್ಗವಾಗಿ ಬೆಂಗಳೂರಿಗೆ ಚಲಿಸುತ್ತಿದ್ದ ಗೋಲ್ ಗುಂಬಜ್ ಎಕ್ಸ್ ಪ್ರೆಸ್ ರೈಲಿ ಡಿಕ್ಕಿಯಾಗಿ 32 ಕುರಿಗಳು ಹಾಗೂ ಓರ್ವ ಕುರಿಗಾಯಿ ಮೃತಪಟ್ಟಿದ್ದಾನೆ.

ಪಾಲಹಳ್ಳಿ ಹಾಗೂ ಪಶ್ಚಿಮವಾಹಿನಿಯ ನಡುವಿನ ರೈಲು ಹಳಿಯಲ್ಲಿ ಈ ದುರ್ಘಟನೆ ನಡೆದಿದೆ. ರೈಲಿನ ಹಾರ್ನ್ ಶಬ್ಧ ಕೇಳಿ ಕುರಿಗಳು ಬೆದರಿ ಹಳಿಯತ್ತ ಬಂದಿವೆ. ಅವುಗಳನ್ನು ಓಡಿಸಲು ಬಂದ ಕುರಿಗಾಯಿ ರೈಲಿಗೆ ಸಿಲುಕಿ ಸಾವನ್ನಪ್ಪಿದ್ದಾನೆ. ಪಾಂಡಪುರ ತಾಲೂಕಿನ ನಿಂಗೇಗೌಡ ಮೃತ ವ್ಯಕ್ತಿ ಎಂದು ತಿಳಿದು ಬಂದಿದೆ.




Leave a Reply

Your email address will not be published. Required fields are marked *

error: Content is protected !!