ಪ್ರಜಾಸ್ತ್ರ ಸುದ್ದಿ
ಶ್ರೀರಂಗಪಟ್ಟಣ: ಮೈಸೂರಿಂದ ಶ್ರೀರಂಗಪಟ್ಟಣ ಮಾರ್ಗವಾಗಿ ಬೆಂಗಳೂರಿಗೆ ಚಲಿಸುತ್ತಿದ್ದ ಗೋಲ್ ಗುಂಬಜ್ ಎಕ್ಸ್ ಪ್ರೆಸ್ ರೈಲಿ ಡಿಕ್ಕಿಯಾಗಿ 32 ಕುರಿಗಳು ಹಾಗೂ ಓರ್ವ ಕುರಿಗಾಯಿ ಮೃತಪಟ್ಟಿದ್ದಾನೆ.
ಪಾಲಹಳ್ಳಿ ಹಾಗೂ ಪಶ್ಚಿಮವಾಹಿನಿಯ ನಡುವಿನ ರೈಲು ಹಳಿಯಲ್ಲಿ ಈ ದುರ್ಘಟನೆ ನಡೆದಿದೆ. ರೈಲಿನ ಹಾರ್ನ್ ಶಬ್ಧ ಕೇಳಿ ಕುರಿಗಳು ಬೆದರಿ ಹಳಿಯತ್ತ ಬಂದಿವೆ. ಅವುಗಳನ್ನು ಓಡಿಸಲು ಬಂದ ಕುರಿಗಾಯಿ ರೈಲಿಗೆ ಸಿಲುಕಿ ಸಾವನ್ನಪ್ಪಿದ್ದಾನೆ. ಪಾಂಡಪುರ ತಾಲೂಕಿನ ನಿಂಗೇಗೌಡ ಮೃತ ವ್ಯಕ್ತಿ ಎಂದು ತಿಳಿದು ಬಂದಿದೆ.