ಪ್ರಜಾಸ್ತ್ರ ಸುದ್ದಿ
ವಿಜಯಪುರ: ರೈಲ್ವೆ ಬೋಗಿಯ ಕೊಂಡಿ ಕಟ್ ಆದ ಪರಿಣಾಮ ಎರಡು ಬೋಗಿಗಳು ವಿಜಯಪುರ ನಗರದ ವಜ್ರಹನುಮಾನ ದೇವಸ್ಥಾನದ ಬಳಿಯೆ ಉಳಿದಿರುವ ಘಟನೆ ನಡೆದು ಸಾಕಷ್ಟು ಆತಂಕ ಮೂಡಿಸಿದ ಘಟನೆ ಇಂದು ಸಂಜೆ ನಡೆದಿದೆ.
ಸೊಲ್ಲಾಪುರ ವಿಜಯಪುರ ಮೈಸೂರ ಸಂಪರ್ಕಿಸೋ ಗೋಲಗುಂಬಜ್ ಎಕ್ಸಪ್ರೆಸ್ ರೈಲಿನ ಬೋಗಿಗಳ ನಡುವಿನ ಕೊಂಡಿ ಕಟ್ ಆಗಿದೆ. ಹೀಗಾಗಿ ಎರಡು ಬೋಗಿಗಳು ಸಂಪರ್ಕ ಕಡಿದುಕೊಂಡು ನಿಂತಿವೆ. ಮುಂದಿನದು ದೂರಕ್ಕೆ ಹೋಗಿದೆ. ಆಗ ಅದರಲ್ಲಿದ್ದ ಪ್ರಯಾಣಿಕರು ಚೀರಾಟ ನಡೆಸಿದ್ದಾರೆ. ಆಗ ಟ್ರೇನ್ ನಿಂತಿದೆ. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ.
ವಿಷಯ ತಿಳಿದು ರೈಲ್ವೆ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರು. ಅಲ್ದೇ ಅಪಾರ ಪ್ರಮಾಣದಲ್ಲಿ ಜನರು ಸೇರಿದ್ದರು. ಬೋಗಿಗಳಿಗೆ ಹೊಸ ಕೊಂಡಿ ಜೋಡಣೆ ಮಾಡಿದ ಬಳಿಕ ರೈಲು ಚಲಿಸಿತು.