ಪ್ರಜಾಸ್ತ್ರ ಸಾಹಿತ್ಯ ಮತ್ತು ರಂಗಭೂಮಿ
ಬೆಂಗಳೂರು: ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥೆ ಹಾಗೂ ಅನುವಾದಕಿ ಡಾ.ಮಲರ್ ವಿಳಿ.ಕೆ ಅವರ ಅನುವಾದಿತ ಕೃತಿ ‘ಕಳ್ಳಿಗಾಡಿನ ಇತಿಹಾಸ’ಗೆ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಪುಸ್ತಕ ಬಹುಮಾನ ಬಂದಿದೆ.
ಖ್ಯಾತ ತಮಿಳು ಲೇಖಕ ವೈರಮುತ್ತು ಅವರ ‘ಕಳ್ಳಿಕ್ಕಾಟ್ಟು ಇತಿಹಾಸಂ’ ಅನ್ನೋ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಇಂಗ್ಲಿಷ್ ಹೊರತು ಪಡಿಸಿ ಬೇರೆ ಭಾಷೆಗಳಿಂದ ಕನ್ನಡಕ್ಕೆ ಅನುವಾದ ಮಾಡಿದ ಕೃತಿಗಳ ವಿಭಾಗದಲ್ಲಿ 2021ನೇ ಸಾಲಿನ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಪುಸ್ತಕ ಬಹುಮಾನ ಬಂದಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ನಗರದ ನಯನ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಬಹುಮಾನ ವಿತರಣೆ ಮಾಡಲಾಗಿದೆ. ಈ ವೇಳೆ ಪ್ರಾಧಿಕಾರದ ರಿಜಿಸ್ಟರ್ ಈಶ್ವರ್ ಕು.ಮಿರ್ಜಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಬಲವಂತರಾವ್ ಪಾಟೀಲ, ಪ್ರಾಧಿಕಾರದ ಅಧ್ಯಕ್ಷ ಅಜಕ್ಕಳ ಗಿರೀಶ್ ಭಟ್, ಸಾಹಿತಿ ಶಾ.ಮಂ ಕೃಷ್ಣರಾಯ, ಪ್ರಾಧಿಕಾರದ ಸದಸ್ಯ ರಾಘವೇಂದ್ರ ಪಾಟೀಲ ಸೇರಿ ಇತರರಿದ್ದರು.